ಪರಿಸರ ಗೀತೆ
ಕೇಳಿರಿ ಕೇಳಿರಿ ನಾಡಿನ ಜನಗಳೇ
ನಮ್ಮಯ ಕಾರ್ಯದ ವೈಖರಿಯಾ..
ಕಸವನು ತೆಗೆದು ಬೀದಿಗೆ ಹಾಕುವ
ನಮ್ಮಯ ಪರಿಸರ ಕಾಳಜಿಯ..
ಪ್ಲಾಸ್ಟಿಕ್ ಬಳಕೆಯ ಹೆಚ್ಚಾಗಿ ಮಾಡಿ
ಬಿಲ್ಡಿಂಗ್ ಕಟ್ಟುವ ಕಾಳಜಿಯ..
ಸಂತೆ ಮಾರ್ಕೆಟ್, ಅಂಗಡಿ ಎದುರಲೂ
ಪ್ಲಾಸ್ಟಿಕ್ ರಾಕ್ಷಸ ಹಾವಳಿಯಾ...
ನದಿಯ ನೀರಲಿ ವಾಹನ ತೊಳೆಯುತ
ಮಾಡುವೆ ನೀರನು ಕೆಸರಂತೆ..
ಕೊಳೆಯನು ಚೆಲ್ಲುತ ನೀರನು ಕೆಡಿಸುತ
ಆಡುವೆ ಬುದ್ಧಿಯೇ ಇಲ್ಲದಂತೆ..
ಚಾಕ್ಲೇಟ್, ಬಿಸ್ಕೆಟ್, ಲೇಯ್ಸ್, ಗುಟ್ಕಾ
ಎಲ್ಲದರಲಿ ಪ್ಲಾಸ್ಟಿಕ್ ಕವರಂತೆ..
ತಿಂದು ಕೊನೆಯಲಿ ಕವರ ಬಿಸಾಕುತ
ಪರಿಸರ ಸ್ವಚ್ಛತೆ ಮರೆತಂತೆ...
ಮನೆಯ ಕಸವನು ವಿಲೇವಾರಿ ಮಾಡದೆ
ಬೆಂಕಿಗೆ ಹಾಕಿ ಉರಿಸುವೆಯಾ?
ಉರಿಯುತ ವಾಸನೆ ಬರಲಿದೆಯೆಂದರೆ
ದೂರಕೆ ಕಟ್ಟಲಿ ಎಸೆಯುವೆಯಾ..
ಎಳನೀರು ಕುಡಿದು ಇಡಿಯ ಕಾಯಿಯನೆ
ಅಂಗಡಿಯೆದುರು ಎಸೆಯುವೆಯಾ..
ನೀರದು ನಿಂತು ಸೊಳ್ಳೆಯು ಹೆಚ್ಚಲು
ಡೆಂಗ್ಯೂ ಮಲೇರಿಯದಿ ನರಳುವೆಯಾ..
ಕೋಳಿ ಮೀನಿನ ತ್ಯಾಜ್ಯವ ತಂದು
ನಿರ್ಜನ ಜಾಗಕೆ ತಳ್ಳುವೆಯಾ..
ವಾಸನೆ ಬರುವುದು ಎನ್ನುತ ಸಾಗುತ
ಸ್ವಚ್ಛ ಪರಿಸರವ ಕೆಡಿಸುವೆಯಾ..
@ಪ್ರೇಮ್@
21.08.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ