ಗಝಲ್
ಕೆಟ್ಟದಾಗಿ ಕಾಡಕಡಿದು ಕರಗಿಸಲು ಸ್ವಾತಂತ್ರ್ಯ ಸಿಕ್ಕಿದೆಯೆಮಗೆ..
ಕೆರಕೆ ಸಮನಾದ ಕೆರಳಿದ ಕೋಪ ತಾಳಲು ಸ್ವಾತಂತ್ರ್ಯ ಸಿಕ್ಕಿದೆಯೆಮಗೆ..
ಕೆದಕುತ್ತಾ ಕೆಲವು ಕೇಳಬೇಡವಾದ ವಿಷಯಗಳನು,
ಕೆಮ್ಮು ಕೆಮ್ಮುತಲಿ ಕೆರೆಗಾಹಾರವಾಗಲು ಸ್ವಾತಂತ್ರ್ಯ ಸಿಕ್ಕಿದೆಯೆಮಗೆ..
ಕೆಂಪ ಕೆಸರಿನ ರಾಡಿಯದು ನೆರೆಯಿಂದಾಗಿಹುದು,
ಮನೆ ಮಠವ ಮುಳುಗಿದವರ ಬಗ್ಗೆ ಬರೆಯಲು ಸ್ವಾತಂತ್ರ್ಯ ಸಿಕ್ಕಿದೆಯೆಮಗೆ...
ಕೇಸರಿಯ ಶಕ್ತಿಯನು ಜಾತಿ ಮತಕೆ ತುಂಬುತಲಿ
ಘರ್ಜನೆಯ ಮಾಡುತಲಿ ಕಾರ್ಯ ಸಾಧಿಸದಿರಲು ಸ್ವಾತಂತ್ರ್ಯ ಸಿಕ್ಕಿದೆಯೆಮಗೆ..
ಕರಿಯ ಕಣ್ಣಿನಲಿ ಕಪ್ಪು ವಸ್ತುವ ನೋಡುತ
ಇತರರ ಕೆಟ್ಟ ಕದನ ಕಾರ್ಯವ ಕದ್ದಾಲಿಸಲು ಸ್ವಾತಂತ್ರ್ಯ ಸಿಕ್ಕಿದೆಯೆಮಗೆ...
ಕುವರರಿವರು ಕರುಣೆಯ ಕರುನಾಡಿನ ಕಾಂತಿಯ,
ಕಸದಂತಿರದೆ ಕಸಿವಿಸಿಯಾಗದೆ ಬದುಕಲು ಸ್ವಾತಂತ್ರ್ಯ ಸಿಕ್ಕಿದೆಯೆಮಗೆ...
ಕಂಪು ಬೀರುತಲಿ ಕಾಂತಿಯ ಚೆಲ್ಲುತಲಿ ಬದುಕೋಣ,
ಕಂಡೆಡೆ ಪ್ರೇಮದ ಮಾತುಗಳನಾಡಲು ಸ್ವಾತಂತ್ರ್ಯ ಸಿಕ್ಕಿದೆಯೆಮಗೆ..
@ಪ್ರೇಮ್@
13.08.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ