ಗುರುವಾರ, ಏಪ್ರಿಲ್ 16, 2020

1397. ವಿಮರ್ಶೆ-ಪ್ರಮೀಳಾ ರಾಜ್ ಹನಿಗವನ

ಪ್ರಮೀಳಾ ರಾಜ್* ಹನಿಗವನ *ತೀರ್ಪು*

ಮನಕ್ಕಂಟಿದ ಅಹಂಕಾರ
ಸುಟ್ಟು ಬೂದಿಯಾಗಿತ್ತು

🍊  *ಭೂತ ಕಾಲದ ಬಗೆಗಿನ ಮನದ ಭಾವನೆಯ ಹರಿವು ಹಿತಕರವೆನಿಸಿದೆ. ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ನಾಣ್ಣುಡಿಯ ಬಿಂಬಿಯಸುವಂತಹ ಸಾಲುಗಳು. ಮನವೊಂದು ತಾ ಮಾಡಿದ ತಪ್ಪಿನಿಂದ ಮರುಗಿ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಸುಂದರ ಸಾಲು.*

ಉದರದೊಳಗಿನ ಹಸಿವು
ಸರಳತೆಯ ಪಾಠ ಕಲಿಸಿತ್ತು

🍊 *ಪ್ರತಿಯೊಬ್ಬ ಬಡತನದ ಬೇಗೆಯಲಿ ಬೆಂದವ ಕಲಿತ ಪಾಠವಿದು. ಒಂದೇ ಸಾಲಲಿ ಇಡಿಯ ಬಡತನದ ಸಮಾಜದ ಕಥನವನೇ ಕಟ್ಟಿ ಕೊಟ್ಟಂತಿದೆ.ಸೂಪರ್*

ಬಡವ,ಶ್ರೀಮಂತನೆನ್ನದೆ
ಪ್ರಕೃತಿ ಸಮಾನ ತೀರ್ಪು ನೀಡಿತ್ತು!!
🍊 *ಹೌದು, ಪ್ರಕೃತಿ ಯಾರಿಗೂ ತಲೆಬಾಗದು. ತನ್ನ ಮಕ್ಕಳು ಎಷ್ಟೇ ವಿದ್ಯಾವಂತ, ಬುದ್ಧಿವಂತರಾದರೂ ಅನಕ್ಷರಸ್ಥೆ ತಾಯಿಯೊಬ್ಬಳಿಗೂ ಅವರನ್ನು ಕಂಟ್ರೋಲ್ ಮಾಡಲು ಗೊತ್ತು. ಅಂತೆಯೇ ನಮಗೆ ಜನ್ಮ ಕೊಟ್ಟ ಪ್ರಕೃತಿಗೂ ನಮ್ಮನ್ನು ತಹಬದಿಗೆ ತಂದು ತನ್ನತನವನು ಉಳಿಸಿಕ್ಕೊಳ್ಳಲು ಯಾರೂ ಹೇಳಿ ಕೊಡಬೇಕಾಗಿಲ್ಲ.*

*ಭೂತಕಾಲದ ವಿವರಣೆಯಲಿ ಮೂಡಿದ ಬಹು ಸುಂದರ ಹನಿಗವನ, ಭಾಷಾ  ಚಿಹ್ನೆಗಳಿರುತ್ತಿದ್ದರೆ ಚೆನ್ನಿತ್ತು.*

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ