ಸ್ನೇಹಿತರೊಡನೆ ನಮ್ಮ ಸಂಗಮ..
ಇದೀಗ ಕಾಲ ಮುಂದುವರೆದಿದೆ. ಜನಕರೆಲ್ಲ ಅಕ್ಷರಸ್ಥರಾದ ಕಾರಣ ಮಾತಿನ ಶಬ್ದ ಮಾಲಿನ್ಯ ಕಡಿಮೆಯಾಗಿ ತಂತ್ರಜ್ಞಾನದ ಇಂದಿನ ಆವಿಷ್ಕಾರಗಳಾದ ಸಾಮಾಜಿಕ ಜಾಲ ತಾಣಗಳಲ್ಲಿ ಬರಹ ರೂಪದ ಮಾತುಕತೆ ಹೆಚ್ಚಾಗಿದೆ. ಅದನ್ನು ದುರುಪಯೋಗ ಪಡಿಸಿಕೊಳ್ಳದೆ ತನಗೊಲಿದ ಬರವಣಿಗೆಯ ಜ್ಞಾನವನ್ನು ಇತರರಿಗೂ ಹಂಚಿ, ಅದೇ ರೀತಿಯ ಆಸಕ್ತ ಕವಿಗಳನ್ನು ಒಟ್ಟಿಗೆ ಸೇರಿಸಿ, ಅವರ ಅಭಿರುಚಿಗೆ ತಕ್ಕಂತೆ ತಾವೂ ಬೆಳೆಯುತ್ತಾ, ಇತರ ಕವಿಗಳನ್ನೂ ಬೆಳೆಸುವ ಕೆಲವೇ ಬೆರಳೆಣಿಕೆಯ ಗುಂಪುಗಳಲ್ಲಿ ಸ್ನೇಹ ಸಂಗಮವೂ ಒಂದು ಹಾಗೂ ಮುಂಚೂಣಿಯಲ್ಲಿರುವ ಗುಂಪು.
ಕವಿಗಳ ಬರವಣಿಗೆ, ವಿಎಮರ್ಶೆ, ಮುಖ ಪರಿಚಯವಿರದಿದ್ದರೂ ಕವನದಿಂದ ಪರಿಚಯವಾದ ಬಗೆ ಇವುಗಳೊಂದಿಗೆ ಅಡ್ಮಿನ್ ಚಂದ್ರು ಸರ್ ಅವರ ಉತ್ತಮ ನಾಯಕತ್ವದ ಗುಣ, ಎಲ್ಲರನ್ನೂ ತನ್ನೊಡನೆ ಎಳೆದುಕೊಂಡು ಹೋಗುವ ಪರಿ ಗುಂಪಿನಲ್ಲಿ ಕವಿಹೃದಯದ ಬಂಧುಗಳ ಸ್ನೇಹವನ್ನು ಮಧುರವಾಗಿಸಿದ ಕವಿಮನಗಳ ಗುಂಪು ಇದಾಗಿದೆ..
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ