ಬುಧವಾರ, ಏಪ್ರಿಲ್ 8, 2020

ಡಿಸೆಂಬರ್ 2020 ಯ ವಿಮರ್ಶೆಗಳು

[12/4/2019, 11:03 AM] Wr Manjula B K: ಪ್ರೇಮ ಅವರ ಕಲಿಯಬೇಕಿದೆ 

ನಾವು ಕಲಿತಿರುವುದು ಬಹಳಷ್ಟು. ಕಲಿಯಬೇಕಾದದು ಸಾವಿರ ಪಟ್ಟು. 

ಎಲ್ಲ ಕಲಿತಿರುವೆ ಎನ್ನುವ ಮದಕಿಂತ ಏನು ಒಳ್ಳೆಯದನ್ನು ಕಲಿಯಬೇಕಿದೆ ಎನ್ನುವುದು ಮುಖ್ಯ ಎಂಬುವುದು ಉತ್ತಮ ಸಂದೇಶ. 

ಮಂಜುಳಾ. ಬಿ. ಕೆ
[12/4/2019, 5:53 PM] Wr Kumar Chalawadi: " ಪ್ರೇಮ್" ರವರ 'ಕಲಿಯಬೇಕಿದೆ' ಕವನ ಮನನೀಯವಾಗಿದೆ! ಎಲ್ಲ ಅನಿಷ್ಟ , ಅಪಸವ್ಯಗಳ ಆಗರವಾದ ಮನುಜನ, ಮನದ ಒಳಕೋಟಿಯನ್ನು ಚೆನ್ನಾಗಿ ಅಭಿವ್ಯಕ್ತಿಸಿರುವಿರಿ! " ಮತ್ತೆ ನಾನು ಕಲಿಯಬೇಕಿದೆ, ಹೄದಯಗಳ ಜೋಡಿಸುವದನು" ತುಂಬಾ ಕಳ- ಕಳಿಯ ಭಾವನೆ ತೋರಿಸಿರುವಿರಿ. ಈ ಭಾವನೆಯನ್ನು ಎಲ್ಲರೂ ಅನುಸರಿಸಬೇಕಿದೆ! ಸುಂದರ ರಚನೆ👌
[12/9/2019, 4:16 PM] +91 97408 87580: ಪ್ರೇಮ್ ಸರ್ 
ನಮಸ್ಥೆ

ಭ್ರಾಂತಿ ಎನ್ನುವ ಪರಧಿಯೊಳಗೆ ಎಳೆಯ 
ಮಕ್ಕಳನ್ನ ಅರ್ಥ ಮಾಡಿಕೊಳ್ಳದೇ
ಬರಿ ದಂಡನೆಯ ಕಡೆಗೆ
ಶಿಕ್ಷಣ ಕೊಡಬೇಡಿ ಎಂದು ಹೇಳುವ ಮೂಲಕ ಮಕ್ಕಳ ಬಗೆಗಿನ ಅವರ ಕಾಳಜಿ ಬಿಂಬಿತವಾಗುತ್ತದೆ.
ಮಕ್ಕಳೆಂದರೆ ತೋಟದಿ ಅರಳುವ ಬಣ್ಣ ಬಣ್ಣದ ಹೂಗಳು
ಹೊಸುಕದೆ ಹೊಸ ಬದುಕು ನೀಡಿ ಎನ್ನುವ ಆಶಯ ತಮ್ಮ ಕವಿತೆಯಲ್ಲಿ ಎದ್ದು ಕಾಣುತ್ತದೆ
ಸೊಗಸಾಗಿದೆ
🙏🙏🙏🙏🙏
[12/11/2019, 2:51 PM] Wr Sreemati Joshi: ಸೋಲದಿರು
ಸಾಲುತಿಲ್ಲ ನೀನು ನೀಡಿದ ಪ್ರೀತಿಯ ಸಾಲ
ಸಾಲದಾಗಿದೆಯೆನಗೆ ನಿನ್ನ ಹೃದಯದ ಜಾಗ
ಸಾಲು ಸಾಲು ಇರಲು ಬೇಕು ಗಮನದ ಕಾಲ
ಸಾಲಿನೊಳಗೆ ಹುದುಗಬೇಕು ನಿನ್ನಯ ಪಾಲು..
*ಪ್ರೀತಿಯನ್ನೇ ಸಾಲ ವಾಗಿಸಿ ಬಿಟ್ಟಿದ್ದೀರಿ ಹೃದಯದಲ್ಲಿ ಜಾಗವೂ ಜಾಗ*🤣🤣
ಸಾಲುಗಳಲಿ ಬರೆಯಲಾರೆ ಪ್ರೀತಿಯ ಪದರ
ಸಾಲಿನಲ್ಲಿ ನಿಲ್ಲಲಾರೆ, ನೀನಿರದಿರೆ ಬರ!
*ಅವಳ ಪ್ರೀತಿಯ ಪವರ್ ಅಂದ್ರೆ ಹಾಗೆ*
ಸೋತ ಮನಕೆ ಸಾಲು ಖುಷಿಯ ತಂದಿಹೆ ನೀನು
ಗೆದ್ದ ಹಿಗ್ಗು ದೈತ್ಯವಾಗೆ ತಣಿಸಿದೆ ನೀನು.
*ಸೋತ ಮನಕೆ ಖುಷಿಯ ತರುವುದೇ ಪ್ರೀತಿ ಅನುರಾಗ. ಆಗ ಗೆಲುವು ಖಚಿತ ಸೂಪರ್ ಸಾಲು*
6ನಾನೆ ನೀನು ನೀನೆ ನಾನು ಒಂದೆ ಸಾಲಲಿ
ನೀನು ಇರದೆ ಕ್ಷಣಕ್ಷಣವು ನೋವು ಬಾಳಲಿ..
*ಪ್ರೀತಿ ಬೆರೆತ ಬಾಳಿನಲ್ಲಿ  ದೇಹ 2 ಜೀವ ಒಂದು ಎನ್ನುಬಿಎಂಸಿಎ ಭಾವ ನೈಸ್*
ಸೋಲು ಗೆಲುವು ಎರಡು ಇಹುದು ಪ್ರತಿ ಹೆಜ್ಜೇಲಿ
ಸೋತ ಮನವು ಗೆಲ್ಲಬಹುದು ಮುಂದೆ ದಾರೀಲಿ..
*ಸಮರಸವೇ ಜೀವನದ ಭಾಗ* 
ಪ್ರೇಮವೆಂದರೇನು ಎಂದು ಅರಿತೆ ಬದುಕಲಿ
ನೀನು ಬಂದು ಮನದ ಕುಣಿತ ದಿನವು ನಲಿವಲಿ..
*ಪ್ರೇಮವು ಅವಳು ಬಂದ ಮೇಲೆ ಅರಿವಿಗೆ ಬಂತು ಅನ್ನುವ ಆಶಯ ಅವಳ ಮೇಲೆ ಇಟ್ಟ ನಂಬಿಕೆ*
ಸೋತು ಗೆಲುವ ಸಾಹಸವು ಇಹುದು ಜಗದಲಿ
ಸೋಲಲಾರೆನೆನುವ ಮಾತು ಬೇಕು ಜನರಲಿ..

ಸೋಲ ಸಾಲು ಬರಲು ಸನಿಹ ಕುಗ್ಗ ಬಾರದು
ಸೋಲು ಇಂದು ಕಡೆಯದಲ್ಲ, ಗೆಲುವಿಗೂ ಹಿಗ್ಗಬಾರದು..ಸುಖ *ಸುಖ ಸಮನಾಗಿ ಸ್ವೀಕರಿಸುವ ಆಶಯ*
ಸೋತು ಸೋಲು ಸೋಲ ಸಾಲು ಓಡಲಿ
ಗೆಲುವ ಸಾಲು ಸೋತ ಬಳಿಕ ಬಂದು ಸೇರಲಿ..

ಸೋಲಿಗಾಗಿ ಅಂಜಬೇಡ ಸೋಲು ಸೋಲಲಿ
ಗೆಲುವಿನಿಂದ ಬೀಗಬೇಡ ಮುಂದೆ ಬಾಳಲಿ..
*ಒಟ್ಟಾರೆ ಕವಿ ಭಾವ ಸೂಪರ್ಬ್. ಆದರೂ ಸ್ವಲ್ಪ ಗಡಿ ಬಿಡಿ ಯಲ್ಲಿ ಬರೆದ ಹಾಗಿದೆ. ನಿಮ್ಮ ಹಿಂದಿನ ಕವನಗಳಿಗೆ ಹೋಲಿಕೆ ಮಾಡಿದಾಗ*
@ಪ್ರೇಮ್@
11.12.2019
[12/24/2019, 11:14 PM] Wr 100 Ahmd: ಗುರುಗಳೆ ನಮಸ್ತೆ👏

ನೀವು ಶಿರೋನಾಮೆಯ ಬಗ್ಗೆ ಹೇಳಿದ್ದೀರಿ ತಪ್ಪಿಲ್ಲ ನಿಮ್ಮ ಮಾತು ಆದರೆ ಕಾವ್ಯಕ್ಕೆ ಭಾಷೆಯ ಪರಿವಿಲ್ಲ ಜೊತೆಗೆ ಎಲ್ಲ ಭಾಷೆಯ ಕಾವ್ಯಗಳು ಉಳಿದ ಭಾಷೆಗೆ ಹರಿದಾಡುತ್ತವೆ 

ನಾನು ಈ ಮುಖಪುಟವನ್ನು ಮೂರು ತರಹದಲ್ಲಿ ಊಹಿಸಿ ಪ್ರಕಟಿಸಿರುವೆ 

ಮೊದಲಿಗೆ ಜಲಾಲುದ್ದಿನ ರೂಮಿ ಮತ್ತು ಶಮ್ಸ್ ತಬರೇಜ್ ಅವರ ಗುರುಭಕ್ತಿಯ ಮತ್ತು ಶಿಷ್ಯರ ಸಂಭದ್ದದ wailding dance ಅನ್ನುವ ಅರ್ಥದಲ್ಲಿ

ನಂತರ ಬೆಳಕಿಗೆ ಮುಖ ಒಡ್ಡಿದಾಗ ಕಣ್ಣು ಉಲ್ಲಾಸಗೊಳಿಸುವ ಜೀವನೋತ್ಸಾಹದ ಉನ್ಮಾದ ಹೊಂದಿರುವ ಭಾವನೆ

ಇನ್ನೊಂದು ಅಂದರೆ ನನ್ನ ಮಡದಿಯ ಹೆಸರು ತಬಸ್ಸುಮ್ ಅಂದ್ರೆ ಮುಗುಳುನಗೆ ನನ್ನ ಹೆಸರು ನೂರ್ ಅಂದರೆ ಪ್ರಕಾಶ ನೂರ್ ಏ ತಬಸ್ಸುಮ್ ಎಂದರೆ ಪ್ರಕಾಶದಲ್ಲಿ ಬೆಳಕು ಎನ್ನುವ ಭಾವದಿಂದ ಈ ಶೀರ್ಷಿಕೆ ಕೊಟ್ಟಿರುವೆ ....👏👏👏👏👏
[12/31/2019, 4:26 PM] Wr Siraj Ahmed Soraba: *ಸಾವನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ನಾನೇ ಬರೆದ
ಒಂದು ಉದು೯ ಗಜಲ್*

*ಗಜಲ್*

ಖುಷಿಯಾಂ ಬರಸೆ ಸಾವನ್ ಕೀ ತರಹ್
ಜಿಂದಗಿ ಮೆಹಕೆ ಚಂದನ್ ಕೀ ತರಹ್

ಕೋಯೀ ಮುಷ್ಕಿಲ್ ಸತಾಯೇ ನಾತುಝೆ 
ಚಮಕ್ತಾ ರಹೇ ತೂ ಕುಂದನ್ ಕೀ ತರಹ್ 

ತೂ ಅಗರ್ ಚಲ್ತಾ ರಹೇ ರಾಸ್ತೇ ಖುದ್ ಖುಲೇ
ಕಾಮಿಯಾಬಿ ರಹೇ ಆಂಗನ್ ಕೀ ತರಹ್ 

ತೇರೆ ಜನಮ್ ದಿನ್ ಪರ್ ದುಆ ಕರೇಗಾ ಸಿರಾಜ್
ಮನ್ಜಿಲ್ ತುಝೆ ಪ್ಯಾರ್ ಕರೆ ಮಧುಬನ್ ಕೀ ತರಹ್

*ಯು ಸಿರಾಜ್ ಅಹಮದ್ ಸೊರಬ*
[12/31/2019, 4:49 PM] Wr Siraj Ahmed Soraba: ನನ್ನ ಉದು೯ ಗಜಲ್ ನ ಕನ್ನಡಾನುವಾದ

*ಗಜಲ್*

ಹರುಷಗಳ ಬರುತಿರಲಿ ಮಳೆ
ಸಿಂಚನದ ಹಾಗೆ
ಜೀವನದಲಿ ಕಂಪು ಹರಡಲಿ 
ಚಂದನದ ಹಾಗೆ

ಯಾವ ಕಷ್ಟವೂ ಕಾಡದಿರಲಿ
ನಿನಗೆ 
ಬೆಳಗುತಿರು ಗೆಳೆಯ ನೀನು
ಕುಂದನದ ಹಾಗೆ 

ನೀ ನಡೆವಾಗ ದಾರಿಗಳು ಖುದ್ದು
ತೆರೆದುಕೊಳ್ಳಲಿ 
ವಿಜಯವು ನಿನಗಾಗಿರಲಿ ನಿನ್ನ
ಅಂಗನದ ಹಾಗೆ 

ನಿನ್ನ ಜನುಮ ದಿನಕ್ಕಾಗಿ ದುಆ
ಮಾಡುವನು ಸಿರಾಜ್
ಗಮ್ಯವು ನಿನಗೆ ಪ್ರೀತಿಸುತಿರಲಿ 
ಮಧುಬನದ ಹಾಗೆ
[12/31/2019, 7:21 PM] Wr Vani Bhandari: *ನಮಸ್ತೇ*
🙏🏻🙏🏻🙏🏻

         *ಪ್ರೇಮ ಅವರ ಭಾವಗೀತೆ*

        *ಮುರುಳಿಯ ಗಾನಕ್ಕೆ ಮನಸೋಲದವರುಂಟೆ* *ಮಾದವನ ಇಲವ ಗಾನಕ್ಕೆ ಮನಸೋತು ಕಾಯುವ ರಾಧೆಯ ಭಾವ*

             ಮಾದವನ ಕೊಳಲು ಗಾನದಿಂದ ಮನದ ತುಮುಲಗಳನ್ನು ಬೇರೆ ಮಾಡಿಕೊಳ್ಳಬೇಕಾದ ಕವಿಭಾವ ಚಿತ್ರಣ ಚೂಪರ್.

       ನಮ್ಮ ನಂಬಿಕೆಯೆಂಬ ಪ್ರೀತಿ ಅಚಲವಾಗಿರುವ ಮಾದವನೇಗೆ ಮೋಸ ಮಾಡಲು ಸಾಧ್ಯ.

ಅತಿಯಾದ ತುಡಿತ ಮಿಡಿತಗಳ ನಾದಲೋಲವು ಮೈಮನಗಳಲ್ಲಿ ತೇಲಿ,, ಮುಕುಂದನ ಗಾನದ ಗಾಳಿ ಸದಾ ಸುಳಿಯಲಿ ಎಂಬ ಮನದ ಭಾವ ಸೊಗಸಾಗಿದೆ.

ಜಗದಲಿ ಮನುಷ್ಯ ಪ್ರೀತಿಗಿಂತ ಅಲೌಕಿಕವಾದ ಪ್ರೇಮವೇ ಶಾಶ್ವತವಾದ ಪ್ರೇಮವಾಗಿದೆ .ಮಾನವ ಅಂತಹ ಪ್ರೀತಿಯ ಜೊತೆ ಸೇರಲು ಬಯಸಿದರೆ ಸದಾ ತನ್ಮಯ ಭಾವದೊಳಗೆ ಶಾಂತತೆಯಿಂದ ಸಂತೃಪ್ತರಾಗಬಹುದು.

*ಇನ್ನುಳಿದಂತೆ,,,,,*

👉ಚಂದದ ಭಾವದ ಹೂರಣ 

👉ಸರಳ ಪದಗಳ ನರ್ತನ.

👉ಗೇಯತೆಯೊಳಗೆ ಮೀಡಿದ ಭಾವತೀವ್ರತೆ.

👉ಕೊನೆಯ ಸಾಲು ಗಮನಿಸಿ *ಬರುವಿಗಾಗಿ* ಹೀಗೆ ಮಾಡಿ ಪಾ.
👉ಉಳಿದಂತೆ ಚಂದದ ಗೀತೆ, ಸರಳ ಸುಂದರ.


*ನಿತ್ಯ ಬರೆಯಿರಿ ಜಿ,,, ಸಾಹಿತ್ಯ ಯಾನಕ್ಕೆ ಶುಭವಾಗಲಿ ತಮಗೆ ಯಶಸ್ಸು ಸಿಗಲಿ*

*ಧನ್ಯವಾದಗಳೊಂದಿಗೆ*

                     *✍ವಾಣಿ ಭಂಡಾರಿ*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ