ಬುಧವಾರ, ಏಪ್ರಿಲ್ 8, 2020

ಫೆಬ್ರವರಿ 2020 ವಿಮರ್ಶೆಗಳು

[2/10, 5:40 PM] Wr Mogeri Shekhar Devadiga: *ರುಬಾಯಿ*

ಮಾಡಬೇಕಯ್ಯ ಯೋಗ, ವ್ಯಾಯಾಮ
ರೋಗರುಜಿನಗಳಿಗೆ ಅದು ಪಂಗನಾಮ
ಚಾಟಿ ಬೀಸಿದರಿಲ್ಲಿ ಕವಿ *ಲಿಂಗರಾಜರು*
ಪರಾವಲಂಬಿ ಬದುಕಿಗೆ ಹಾಕಿ ವಿರಾಮ

*ಮೊಗೇರಿ ಶೇಖರ ದೇವಾಡಿಗ*
[2/11, 7:31 AM] Wr Shivaprasad Aradhya: ಈ ದಿನದ ಮೊದಲಕವನ ಆಳವಾಗಿದೆ. ಅದು ಭೂಮಿಯೊಳಗೇ ಹೋಗಿದೆ.ಒಂದು ಮೊದಲ ಕವನವೇ ಅತ್ಯುತ್ತಮವಾಗಿ ಹೊರಹೊಮ್ಮುತಿರುವ ಬಳಗದ ಹಾಗೂ ಕವಿಯ ಹೆಗ್ಗಳಿಕೆ ಇದಾಗಿದೆ.

ತೆರೆಮರೆಯ ಸಾಧನೆ ನಿಜಕ್ಕೂ ಮನೆಯ ತಾಯಿಯದು.ಆಕೆ ಒಳಗೆ ನನಗಾಗಿ ನಮ್ಮ ಕುಟುಂಬಕ್ಕೆ ಚಾಕರಿ ಮಾಡುತಾ ನನ್ನನ್ನು ಚಿಂತಕರ ಚಾವಡಿಗೆ ಬಿಟ್ಟಿದ್ದಾಳೆ.ಆದರೆ ನಿಜವಾದ ಚಿಂತಕಿ ನನ್ನವಳು.ನಾನು ಬರಿಯ ಸೊನ್ನೆ

ತಾಯಿ ಬೇರಂತೆ ಕುಟುಂಬದ ಜೀವಾಳ ಒಲವ ಜಲ ಅವಳು.ಹುಡುಕುಡುಕಿ ಒಲವುಗಳ ಸಾಗಿ ನೆಲೆಯ ಭದ್ರ ಪಡಿಸುವಾಕಿ.ಸಂಸಾರದ ಗಿಡ ಮರವಾಗಿ ನೆಲೆಯಾಗಲು ತಾಯಿ ತಾಯಿ ಬೇರಾಗಿ ಹೊರಜಗದ ಮರೆಯಲೇ ದುಡಿಯುವವಳು.

ಅಪ್ಪ ಆಕಾಶ ಅಮ್ಮ ಭೂಮಿ.ಅಪ್ಪನ ತಲೆಯೆತ್ತಿ ಓಡಾಡುವ ಘನತೆಯ ಹಿಂದೆ ಅಮ್ಮನ ಆಳವಾದ ತಪವಿದೆ.ಮನೋಜ್ಞವಾಗಿ ಬರೆದಿರುವ ತಾಯಿಗೆ ಶರಣು ಶುಭೋದಯ ಶುಭವಾಗಲಿ

 ಶಿವಪ್ರಸಾದ್ ಆರಾಧ್ಯ
[2/13, 1:46 PM] Wr Vinuta Kicchikeri: ಪ್ರೇಮ್ ಮೇಡಮ್ ಜೀ ನಮಸ್ತೇ

👉🏻 ರಾಗ ಬಧ್ಧವಾಗಿ ಬರೆದ ಕವನ ಚಂದ

👉🏻 ಇಂದಿನ ಪದ ಬಳಕೆ ಮಾಡಿ ಮೂಡಿಬಂದಿದೆ

👉🏻 ಸರ್ಕಾರಿ ಶಾಲೆಯಲ್ಲಿ ಏನು ಕಲಿಸುತ್ತಾರೆ ಎಂಬುದಕ್ಕೆ ಉತ್ತರವಿದೆ

👉🏻 ಪಾಲಕರು ಎಷ್ಟು ಕಷ್ಟ ಪಟ್ಟು ನಮ್ಮನ್ನು ಓದಲಿ ಎಂಬ ಉದ್ದೇಶ, ಶಿಕ್ಷಕರು ನಮಗೆ ಒಳ್ಳೆಯ ಪಾಠ,ಕಲಿಕೆ,ನೀತಿ ಕಥೆಗಳು, ನಾವು ನಮ್ಮ ಸ್ನೇಹಿತರ ಜೊತೆ ಹೇಗಿರಬೇಕೆಂಬುದನ್ನು ಶಾಲೆ ಕಲಿಸಿಕೊಡುತ್ತದೆ..ಪದವಿ ಪಡೆದರು ಸಾಲದು ಅಮ್ಮನ ಜೀವನ ಪಾಠವೂ ಮುಖ್ಯ. ರುಚಿ,ಶುಚಿಯ ಬಗ್ಗೆ ಒಂದಷ್ಟು ತಿಳುವಳಿಕೆ ನೀಡುವದು ಅಮ್ಮ ಎಂಬುದನ್ನು ನಿಮ್ಮ ಕವನದಲ್ಲಿ ತಿಳಿಸಿದ್ದೀರಿ

👉🏻ಕೊನೆಯ ಚರಣ ಹಿಡಿಸಿತು

ಧನ್ಯವಾದಗಳು💐
ವಿನುತಾ ಕಿಚ್ಚಿಕೇರಿ
[2/15, 2:27 PM] Wr Vara Lakshmi Amma: ಪ್ರೇಮ ಅವರ ಶಿವಸ್ತುತಿ

 ಸಾಮಾನ್ಯವಾಗಿ   ನಾವು  ಪ್ರಾರ್ಥನೆ ಮಾಡುವಾಗ  ಅದು ಕೊಡು,  ಇದು ಕೊಡು,  ಎಂದು ಬೇಡಿಕೆಗಳ ಪಟ್ಟಿ ಇಡುತ್ತಾ ಹೋಗುತ್ತೇವೆ,  ಆದರೆ ಕವಯತ್ರಿ  ಪ್ರೇಮ ಅವರು ನಮ್ಮಲ್ಲಿರುವ ಮಾತ್ಸರ್ಯ,  ದ್ವೇಷ ಅವುಗಳನ್ನು  ನೀಗಿಸಿ ಎಲ್ಲರಲ್ಲಿ  ಪ್ರೇಮಭಾವವನ್ನು ತುಂಬಿ,  ಭಕ್ತಿಮಾರ್ಗದಲ್ಲಿ ನಡೆಯುವ ಶಕ್ತಿ ಕೊಡು ಎಂದು ಶಿವನನ್ನು  ಸ್ತುತಿಸಿದ್ದಾರೆ.   ಭಕ್ತಿಯ ಮಾರ್ಗದಲ್ಲಿ  ನಡೆಯುತ್ತಾ  ಜೀವನದ ಉತ್ತುಂಗಕ್ಕೇರುವ ಬಯಕೆ ವ್ಯಕ್ತಪಡಿಸಿದ್ದಾರೆ.  ಸದುದ್ದೇಶದ  ಕವನ 🙏
[2/15, 6:02 PM] Wr Nagamma: ಪ್ರೇಮ್ ‌ಜೀ🙏🏼

ನಿಮ್ಮ 
ಶಿವಸ್ತುತಿಗೆ..

ತಲೆ‌ದೂಗಿದೆ..

ನನ್ನ ‌ಗುಣಗಳ ‌ಉತ್ತುಂಗಕ್ಕೇರಿಸು..ವಾವ್ ಸೂಪರ್..

ಚೆಂದದ ‌ದೈವ ಸ್ಮರಣೆ
.
.ಭಕ್ತಿ ಸ್ಪುರಣ..!!

ತಮ್ಮ..ಸುಂದರ ವಾದ‌ಶಿವಸ್ತುತಿಗಾಗಿ..

ಧನ್ಯವಾದಗಳು.

ಎಸ್. ನಾಗಮ್ಮ🌹
[2/17, 11:47 AM] Wr Prashanth R Dyvajna: 💐🙏 ಪ್ರೇಮ್ ಸರ 🌹

ಬದುಕು ಬಂಗಾರ🌹

🌹ಸುಂದರವಾದ ಕವನ ರಚನಿ ಭಾವನೆಗಳಿಂದ ತುಂಬಿದ, ಮನಸಿನ ಭಾವ ಬಂಧನ ವಿಶೇಷ ಸ್ನೇಹ ಮಿಲನಗಳ ಹೇಳುವ ಕವನ 👌👌👌


ಅಂದದ ಕವನ 👌👌👌

ಬಾಬಣ್ಣ. 
(ಪ್ರಶಾಂತ ಆರ ದೈವಜ್ಞ)
ಕರೇಕ್ಯಾತನಹಳ್ಳಿ.
[2/18, 8:11 AM] Wr Vinuta Kicchikeri: ಪ್ರೇಮ್ ಮೇಡಮ್ ಜೀ🙏

👉🏻ಕವನದ ಆಶಯ ಸೂಪರ್

👉🏻 ಬದುಕಲ್ಲಿ ಏನೇನು ನೋಡಬಹುದು...ಒಂದು ಮುಂಜಾನೆಯಿಂದ ಸಂಜೆಯವರೆಗೆ ಎಂಬುದನ್ನು ಬಹಳ ಚೆನ್ನಾಗಿ ಬರೆದಿರುವಿರಿ.

👉🏻ಕೊನೆಯ ಚರಣ ಮನಸ್ಸಿಗೆ ಹಿಡಿಸಿತು

👉🏻 ಆದರೆ ಕಣ್ಣೀರು ಪದ ನನಗೆ ಕಾಣಲಿಲ್ಲ(ಕ್ಷಮಿಸಿ)
ಕೊನೆಯ ಸಾಲಿನಲ್ಲಿ ಇತರರಿಗೆ ಆಗಬೇಕಿತ್ತೇನೋ..‌ಲಗುಬಗೆಯಿಂದ ಬರೆದಿರುವಿರಿ ಅನಿಸಿತು


ಧನ್ಯವಾದಗಳು👏💐
ವಿನುತಾ ಕಿಚ್ಚಿಕೇರಿ
[2/18, 10:33 AM] +91 89701 82067: ಪ್ರೇಮ್ರವರೆ ಯೋಚನಾಲಹರಿಯನ್ನು ತುಂಬಾ ಆಳಕ್ಕಿಳಿಸುವ ಕವನ."ಸಂತನಾದರೂ ಮನದಿ ದುಃಖವಿರುವ ಹಾಗೆ" ಎಷ್ಟು ಆಳವಾದ ಯೋಚನೆ!!ವಾಹ್...ಕೆಲವರಿಗೆ ಹಾಗೆ ಕಷ್ಟಗಳು ಬಂದರೆ ಬರುತ್ತಲೇ ಇರುತ್ತವೆ.ಆದರೆ ಕರಿಮೋಡವೂ ಕಳೆದು ಮಳೆಯಾಗುತ್ತದೆ ಕಾಯಬೇಕಷ್ಟೇ.ಮೂರನೆಯ ಚಾರಣ ಓದುತ್ತಾ ಜಯಂತ್ ಕಾಯ್ಕಿಣಿಯವರ "ಬೊಗಸೆಯಲ್ಲಿ ಮಳೆ" ಕೃತಿ ನೆನಪಾಯಿತು.ಗಡಿ ಅಂದರೆ ಏನಪ್ಪಾ ಎಂದು ಪ್ರಶ್ನಿಸುವ ಸೈನಿಕರಿಗೆಲ್ಲ ಆಟಿಕೆಯ ಪಿಸ್ತೂಲ್ ನೀಡುವ ಮೂಲಕ ಎಲ್ಲರನ್ನೂ ನಗಿಸಬಾರದೇಕೆ ಎಂದು ಮುಗ್ಧವಾಗಿ ಪ್ರಶ್ನಿಸುವ ಮಗು ದೇಶದೇಶಗಳ ನಡುವಿನ ವೈಮನಸ್ಯದ ವಿಷಯ ಬಂದಾಗ ಪ್ರತೀ ಬಾರಿಗೂ ನೆನಪಾಗುತ್ತದೆ ನನಗೆ.ತಾ ಬದುಕಿ ಇತರರಿಗೂ ಅವಕಾಶ ಕೊಡಬೇಕು ಎನ್ನುವ ಕವಿ ಭಾವ ಇಷ್ಟವಾಗುತ್ತದೆ.🙏🏻

ನಿಶ್ಮಿತಾ ಪಳ್ಳಿ
[2/18, 5:13 PM] Tr Ramesh: ಪ್ರೇಮ್ ಅವರ ಕವನ *ಜೀ-ವನ ಕ-ವನ* ಚೆನ್ನಾಗಿದೆ.  ಮೂರು ದಿನದ ಬಾಳು.. ಪ್ರೀತಿಯಿಂದ ಬಾಳುವುದೊಂದನ್ನು ಬಿಟ್ಟು ಮತ್ತೆಲ್ಲ ಮಾಡುತ್ತಿದ್ದೇವೆ.. ದಿನವೂ ಸಂತಸವಾಗಿ ಬಾಳುವ ಎಂಬುದನ್ನು ಬಹಳ ಅರ್ಥವತ್ತಾಗಿ ತಿಳಿಸಿದ ಕವನ..

ಧನ್ಯವಾದಗಳು ತಮಗೆ 🙏
[2/19, 7:08 AM] Wr Shivaprasad Aradhya: ಪ್ರೇಮ ಕವಿಯತ್ರಿಯ ಬರಹ
ಚ್ಚ ಚ್ಚ ಆದಿಪ್ರಾಸದಲಿ ಹುಚ್ಚ ಎಬ್ಬಿಸಿ ಕುಣಿಸಿವತಣಿಸಿದ ಕವಿಗೆ ಶರಣು ಆದರೆ ತುಚ್ಛಗೆ ದಾನ ಮಾಡಬಾರದು.ಅರ್ಹರಿಗೆ ನೀಡಬೇಕು ಪ್ರಾಸ ದ ಬರದಲಿ ತಪ್ಪಾಗಿದೆ.ಒಟ್ಟಾರೆ ಪ್ರಾಸದ ಬರದಲಿ ಹೀಗೂ ಹುಚ್ಚೆದ್ದು ಬರೆಯಬಹುದೆಂದು ತೋರಿಸಿದ್ದೀರಿ ಅಬ್ಬಬ್ಬಾ ಭಲೇ ಕವಿಯೇ ನೀವೇನು ಸುಮ್ಮನೇನಾ ಎಚ್ಚರವಾಗಿರಬೇಕು ವಿಮರ್ಶೆಗೂ ಮುನ್ನ

ಶಿವಪ್ರಸಾದ್ ಆರಾಧ್ಯ
[2/25, 8:51 AM] Wr Anuradha Shivaprak: ಪ್ರೇಮ್ ಅವರ ಭಾರತೀಯರ ಬುದ್ಧಿ

ಇಂದಿನ ದಿನಗಳಲ್ಲಿ ಭಾರತೀಯರಾದ ನಾವು ಭಾರತದ ಮೂಲ ಸಂಸ್ಕೃತಿ ಮರೆತು ವಿದೇಶಿಯರ ಅನುಕರಣೆ ಮಾಡುತ್ತಿರುವುದು ನಿಜಕ್ಕೂ ಖೇದಕರ. ವಿಕೃತ ಮನಸ್ಸಿನ ಸ್ಥಿತಿಯೂ ಹೌದು. ಭಿಕ್ಷುಕರಂತೆ ಹರಿದ ಬಟ್ಟೆ ಹಾಕಿಕೊಳ್ಳುವುದು ಮಿನಿ ಮಿಡಿಗಳಲ್ಲಿ ಅಂಗ ಪ್ರದರ್ಶನ ಮಾಡುವುದು ನಿಜಕ್ಕೂ ಸಂಸ್ಕೃತಿಯ ಅಧಃಪತನಕ್ಕೆ ಹಿಡಿದ ಕೈಗನ್ನಡಿ. 

ಒಳ್ಳೆಯತನವ ಅರಿತುಕೊಂಡು ಅದರಂತೆ ಬದುಕೋಣ ಹಾಯ್ ಬಾಯ್ ಬಿಟ್ಟು ಗೌರವಪೂರ್ವಕ ನಮಸ್ಕಾರ ಸಲ್ಲಿಸೋಣ ಎಂಬ ಆಶಯ ಹೊಂದಿದ ಕವನ ನಿಜಕ್ಕೂ ಉತ್ತಮವಾಗಿದೆ
[2/28, 11:43 AM] +91 70267 76576: ಪ್ರೇಮಾ ಜೀ ಅವರ💐 ಅರ್ಪಿತ  ಹಾರ💐
      ಹನಿ ಬಳಗವ ಹೆಣೆದು ಸಾಹಿತ್ಯ ಸೇವೆ ಮಾಡುತ್ತಿರುವ ಕವಿಮನಗಳಿಗೆ ಅರ್ಪಿಸಿದ ನಿಮ್ಮ ಕವನ ಸುಂದರ ಜಿ... ಬಿಡುವಿಲ್ಲದ ಸಮಯದಲ್ಲಿ ತಿದ್ದಿ ತಿಡಿ ಕಲಿಸುವ ಬಳಗದ ಕಾರ್ಯ ಶ್ಲಾಘನೀಯ.... ಪ್ರೀತಿ, ಸ್ನೇಹ ಮಮಕಾರದಿ ಬೆಳೆಸುವ ಬಳಗ.ಉಳಿ ಪೆಟ್ಟು ಬಿದ್ದಾಗಲೇ ಕಲ್ಲೊಂದು ಮೂರ್ತಿ ಆಗುವದು ಹಾಗೆ ಹೀರಿಯರು ನಮ್ಮ ತಪ್ಪುಗಳನ್ನ ನೇರವಾಗಿ ಹೇಳಿದಾಗ ಬೇಸರಿಸದೆ ತಿಳಿದುಕೊಂಡು ಕಲಿತರೆ ಖುಷಿ ಇಂದ ಕಲಿಯಬಹುದು. ಪ್ರತಿಯೊಂದು ಅಕ್ಷರದ ಸಾಲುಗಳು ವಜ್ರದ ಹಾರಗಳಾಗಿ ಕನ್ನಡಾಂಬೆಯ ಶೃಂಗರಿಸುವ ಭಾವ ವಾವ್ ಅದ್ಭುತ ಜಿ..  ನಿಮ್ಮ ಬಳಗದ ಪ್ರೀತಿಗೆ ಶರಣು ಹೇಳುತ್ತ ಅನಿಸಿಕೆಗಳು ತಪ್ಪಾದಲ್ಲಿ ಕ್ಷಮೆ ಇರಲಿ ಜೀ 
ಧನ್ಯವಾದಗಳು ...

ಜಯಶ್ರೀ..
[2/28, 1:18 PM] Wr Manjula B K: ಪ್ರೇಮ್ ಅವರ ಪದಗಳ ಹಾರ 

ಒಂದು ವಿಭಿನ್ನ ವಿಷಯವನ್ನು ಕವಿತೆಯಲ್ಲಿ ಕವಿತೆಯ ಬಗ್ಗೆಯೇ ಕವನ ರಚಿಸಿದ ಬಗೆ ಸೊಗಸು. 

ಒಂದು ಕವಿತೆಯನ್ನು ರೂಪಿಸುವಾಗ ಯಾವ ಹಂತಗಳನ್ನು ಅನಿಸರಿಸಿದರೆ ಉತ್ತಮ ಕವಿತೆ ರೂಪಿತವಾಗುತ್ತದೆ ಎನ್ನುವ ಸಾಲುಗಳು ಉತ್ತಮ. 

ಮಂಜುಳಾ. ಬಿ. ಕೆ
[2/28, 3:08 PM] Wr Vara Lakshmi Amma: ಪ್ರೇಮ ಅವರ **ಅರ್ಪಿತ ಹಾರ*

 ಸುಂದರವಾದ ಹೂಮಾಲೆಯೊಂದನ್ನು  ಅಂದವಾದ  ಪದ ಸಮೂಹದಿಂದ ಪೋಣಿಸಿ ಅರ್ಪಿಸಿದ್ದಾರೆ.  ಹಿಂದಿನಿಂದ ನಾರು ಸ್ವರ್ಗಕ್ಕೆ ಸೇರುವಂತೆ  ಈ ಹನಿ ಹನಿಬಳಗಕ್ಕೆ ಬಂದ ಕವಿಗಳು ಬರೆಯುತ್ತಾ ತಿದ್ದುತ್ತಾ ಉತ್ತಮ ಗುಣಮಟ್ಟದ  ಸಾಹಿತ್ಯ ನೀಡುತ್ತಾರೆ.  ಇಂಥ ಬಳಗಕ್ಕೆ ಇವರ ಹಾರದ ಅರ್ಪಣೆ ನಿಜಕ್ಕೂ ವಂದನೀಯ.  ಉತ್ತಮ ಬರಹಗಾರರ ಪ್ರೇಮ ಅವರ ಸಾಹಿತ್ಯ  ಸೇವೆಯಲ್ಲಿ  ಹೀಗೆ ಮುಂದುವರಿಯಲಿ ಎಂದು ಹಾರೈಸುವ🙏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ