ಪಿ ಗೋವಿಂದಪ್ಪ*
*ಬಡವನಹಳ್ಳಿ* ಅವರ ಹನಿ.....
🍇ಸಾಮಾನ್ಯ ಸಮಸ್ಯೆಯ ಸುತ್ತ ಹೆಣೆದ ಹನಿಗವನವಿದು.ಕವಿಯ ಆಶಯ ಉತ್ತಮ.🍇
*ದಾಯಾದಿ ಮತ್ಸರ*
ಒಡಲೊಂದು, ಕವಲೊಡೆದ ಕುಡಿಯರೆಡು
ಅಳುವಾಗ ಸಂತೈಸಿ ಕಣ್ಣೊರೆಸುವ ಕೈಯೆರಡು
🍇ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿ, ಒಂದೇ ತಾಯಿ, ಮನೆಯನ್ನು ಹಂಚೆಕೊಂಡವರಿವರು. ಕುಡಿಯೆರಡು ಎಂದಾಗಬೇಕಿತ್ತು ನೋಡಿ. ಯರಡು ಆಗಿದೆ.🍇
ಮಡಿಲ ಮಮತೆ ,ಹೆಗಲ ಹರುಷ ಹಂಚಿ ಮೆರೆದವು
ಒಂದೇ ಮನ ಒಂದೇ ಜೀವದಂತೆ ಬಾಳಿದವು.
🍇ಭೂತಕಾಲದ, ಬಾಲ್ಯದ ಬದುಕನ್ನಿಲ್ಲಿ ಮೆಲುಕು ಹಾಕಲಾಗಿದೆ. ಕವಿಯ ಮನದಾಳ ಕವನ ರೂಪದಲಿ ಹೊರಹೊಮ್ಮಿದೆ.🍇
ಬಾಲ್ಯವೆಲ್ಲ ಬೇವುಬೆಲ್ಲ ಬೆರೆಸಿ ತಿಂದ ಯುಗಾದಿ
ಬಲಿತ ಮನಸು ಆಸ್ತಿಗಾಗಿ ಹೆಸರು ಹೊತ್ತು ದಾಯಾದಿ
🍇ಬಾಲ್ಯಕ್ಕೂ, ಯೌವನಕ್ಕೂ ಹೊಂದಾಣಿಕೆ ಮಾಡಲಾಗಿದೆ. ಬುದ್ಧಿ ಇರದಾಗಿನ ಒಳ್ಳೆತನ,ಬುದ್ಧಿ ಬಂದಾಗಿನ ಕೆಟ್ಟಗುಣ ಕವಿತೆಯ ಸಾಲಿನಲ್ಲಿ ಒಡಮೂಡಿದೆ.🍇
🍇ಹನಿಯಲ್ಲೆ ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಯೊಂದರ ನೈಜ ಚಿತ್ರಣವನ್ನು ಕಟ್ಟಿಕೊಟ್ಟ ತಮ್ಮ ಹನಿಗವನ ಅರ್ಥಗರ್ಭಿತವಾಗಿದೆ ಸರ್.👌👌🍇
@ಪ್ರೇಮ್@
20.04.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ