ಸಂತಸವಾಗಿರಲಿ ಬದುಕು
ಬರಬೇಕು ಬಾಳಲ್ಲಿ
ಬರಿದಾಗದ ಬಳುವಳಿ
ಬರ ಬಾರದೆ ಭಯವಿಲ್ಲದೆ
ಬದುಕು ಇರಲಿ ಖುಷಿಯಲಿ..
ಸಂತಸದ ಸಂಪ್ರೀತಿ
ಸಂಗಾತಿಯಾಗಿರಲೆಂದೂ
ಸವಿ ಮಾತು ಸವಿ ಗಾನ
ಸಂತೃಪ್ತಿ ತರಲೆಂದೂ..
ಮನಕೆಲ್ಲ ಮುದನೀಡುವ
ಮೌನವನು ಮರೆಯಾಗಿಸಿ
ಮನಶಾಂತಿಯ ಮರವಾಗಿಸಿ
ಮತ್ಸರವ ಮರಗಟ್ಟಿಸಿ...
ಕಂಪಿನ ಬಾಳ ಕಸರತ್ತಲಿ
ಕವಿ-ಕಲೆಯ ಕರುನಾಡಲಿ
ಕರೆಯೋಲೆಯ ಕರೆಯಂತೆ
ಕಮರಿ ಹೋಗದೆ , ಖುಷಿ ತರಲಿ!
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ