ಬುಧವಾರ, ಏಪ್ರಿಲ್ 8, 2020

ಜನವರಿ 2020ರ ವಿಮರ್ಶೆಗಳು

[1/2, 4:02 PM] Nybr Pramila: *ಇಂದು ನಾಳೆಗಳೊಡನೆ*

ಪ್ರೇಮ್ ಜಿ ಯವರ ಭಾವ ಗೀತೆ.... 

ಗೀತೆಯ ಆರಂಭವೆ ವಾವ್ ಎನ್ನುವ ಹಾಗಿದೆ. 

ನಾಳೆಗಳ ನಾಳೆಯಲಿ 
ಇಂದೇಕೆ ಬದುಕುವಿರಿ
ಇಂದಿನೈಸಿರಿ ಸೊಬಗ
ಇಂದೇ ಅನುಭವಿಸಿ....

ವಾವ್... ಎಂಥಹ  ಸೊಗಸಾದ ಸಾಲುಗಳು.

ನಾಳೆಗೆ  ನಾಳೆಗೆ  ಎಂದು ಎಲ್ಲವನ್ನು ಮಂಡೆ ಬಿಸಿ ಮಾಡಿಕೊಂಡು ದಿನ ಹಾಳು ಮಾಡಿ ಕೊಳ್ಳುವುದಕ್ಕಿಂತ 
ಇಂದು ಚಂದದಿಂದ ಬದುಕಿ ಬಿಡಬೇಕು.

ಇಂದು ಇಂದಿಗೆ ನಾಳೆ ನಾಳೆಗೆ 
ಇಂದು ನಮ್ಮದೇ ಚಿಂತೆ ಯಾತಕೆ..ಅಲ್ವ??? 

ತುಂಬಾ ಚಂದ ಬರೆದಿರುವಿರಿ ಜಿ 
ಶುಭವಾಗಲಿ, 

ನಿಮ್ಮ  ಸಾಹಿತ್ಯ ಯಾನ ಹೀಗೆ ಮುಂದುವರಿಯಲಿ🌹🌹🌹🌹
[1/8, 9:11 AM] Wr Siraj Ahmed Soraba: ಚಿತ್ರಕ್ಕೆ ಹೊಂದುವಂತೆ ಬರೆದಿರುವ ಸೊಗಸಾದ ಬರುಹ ತಮಗೆ ಅನಂತಾನಂತ ಅಭಿನಂದನೆಗಳು
[1/8, 9:26 AM] Wr Kumar Chalawadi: @ಪ್ರೇಮ್@ ರವರ ಹನಿ ಚೆನ್ನಾಗಿದೆ! ಸಮಯದ ಜೊತೆ ನಾವೆಲ್ಲ ನಾಗಾಲೋಟದಲ್ಲಿ ಓಡುತ್ತಲೇ ಇದ್ದೇವೆ! 
ತಾಳ್ಮೆ ಇಲ್ಲವೇ ಇಲ್ಲ! ಸರಿಯಾಗಿ ಸಾಗಿದರೆ ಬಾಳು ಸುಂದರ! ಸಂಯಮ ಮೀರಿದರೆ ಬದುಕೆಲ್ಲ ಬರೀ ಗೋಳು! ಚೆಂದದ ಹನಿ👌
[1/8, 10:18 AM] Wr Vinuta Kicchikeri: ಬೇಕು

ಓಡುತಿರುವ ಯುಗದಲಿ
ಸಮಯದೊಡನೆ ಓಡುವೆ
ಬೇಕಾಗಿದೆ ಸಂಯಮ ಸಹನೆ
ಎಲ್ಲಿಹುದು ಜನಕೆ ಕರುಣೆ?
@ಪ್ರೇಮ್@
08.01.2020


ಪ್ರೇಮ್ ಜೀ🙏

ನಿಜ ಜೀ ನಾವು ಎಲ್ಲರೂ ಓಡುತ್ತಿದ್ದಾರೆ ನಾವು ಓಡುತ್ತಿದ್ದೇವೆ.ಕೇಳಿದರೆ.
ಕುಳಿತು ಮಾತಾಡಲೂ ಸಮಯವಿಲ್ಲ ನಮ್ಮ ಕೈಯಲ್ಲಿ..
ಅದಕ್ಕಿಂತ ಹೆಚ್ಚಾಗಿ ತಾಳ್ಮೆಯಿಲ್ಲ ಮನದಲ್ಲಿ..ಯಾರೋ ಅಪಘಾತವಾಗಿ ಬಿದ್ದರೆ ಅವರನ್ನು ಉಪಚರಿಸುವದರ ಬದಲು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಆತುರ...
ಕರುಣೆಗೆ ಅರ್ಥವನ್ನೇ ಮರೆಯುತ್ತಿದ್ದೇವೆ...
ಅರ್ಥಪೂರ್ಣ ಹನಿ

ಧನ್ಯವಾದಗಳು💐
ವಿನುತಾ ಕಿಚ್ಚಿಕೇರಿ
[1/15, 11:56 AM] +91 70267 76576: ಪ್ರೇಮಾ ಜೀ ಅವರ
  ನಯನ
ಯತ್ರ ನಾರ್ಯಂತು ಪುಜ್ಯಂತೆ ರಮಂತೆ ತತ್ರ ತತ್ರ ದೇವತಾಃ ಎಂದು ಹೇಳುತ್ತೇವೆ ಆದರೆ ಬದುಕು ಬಲು ಬಿರುಸು ಹೆತ್ತ ಕರುಳೆ ಕಿತ್ತು ತಿನ್ನುವ ಹದ್ದಾಗುತ್ತದೆ.ಆಶ್ರಯದ ನೆಪದಲ್ಲೇ ಆಕ್ರಂದನ ಕೇಳುತ್ತದೆ.ಮುಗಿಯದ ಶೋಷಣೆಯಲ್ಲಿ ಅರಳುವ ಹೂ ಗಳೇಷ್ಟೋ, ಕಮರಿದ ಮೊಗ್ಗುಗಳೇಷ್ಟೋ. ಆ ನಯನಳ ಕಣ್ಣೀರಿಗೆ  ಕೊಣೆಯಲ್ಲಿ....
ಮಾರ್ಮಿಕ ಕಥೆ ಜೀ

ಕವಿ ಭಾವ ತಿಳಿಯುವಲ್ಲಿ ತಪ್ಪಾಗಿದ್ದರೆ ಒಂದು ಕ್ಷಮೆ ಇರಲಿ ಜೀ...

ಜಯಶ್ರೀ...
[1/16, 8:39 PM] Wr Sudha Telkar Mam: ಸೊಗಸಾದ ವಿಮರ್ಶೆಗೆ ಮನಃಪೂರ್ವಕ ಧನ್ಯವಾದಗಳು ಪ್ರೇಮ್. ‌ಬಹಳ ಜನ ರಿಟೈರ್ ಆದ ಮೇಲೂ ದುಡಿಯುವುದು ನಿಜ. ನಿನ್ನ ಅನಿಸಿಕೆಗೆ ನನ್ನ ಸಹಮತವಿದೆ. 
ಕೆಲವು ಸಲ ಮನೆಯಲ್ಲಿ ಪ್ರೋತ್ಸಾಹ ಇರದೆಯೋ , ಅನಾರೋಗ್ಯದಿಂದಲೋ ಎಲ್ಲರೂ ದುಡಿಯಲಾಗುವುದಿಲ್ಲ. ವಯಸ್ಸು ಹೆಚ್ಚಾಗಿದ್ದರೂ ಕೈಲಾಗುವುದಿಲ್ಲ. 
ಆದರೂ ತುಂಬಾ ಅವಸರದಲ್ಲಿ ಬರೆದೆ. ನನಗೇ ತೃಪ್ತಿಯೆನಿಸಲಿಲ್ಲ. 
ಇಂದಿನ ಅಡ್ಮಿನಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿರುವೆ. ಸಲಹೆ ,ಸೂಚನೆಗಳಿಗೆ ಸದಾ ಸ್ವಾಗತವಿದೆ ಪ್ರೇಮ್. ಅಭಿನಂದನೆಗಳು.🙏🙏💐💐😊
[1/18, 2:44 PM] Wr Veena Joshi Ankola: ಪ್ರೇಮ  ಅವರ  ಪ್ರಾಣ 

*   ಪ್ರಾಣ  ಅಮೂಲ್ಯ .
*  ಅದನ್ನು  ಚೆನ್ನಾಗಿ  ಪದಗಳ ಜೋಕಾಲಿಯಲಿ ಇಟ್ಟು  ಚೆನ್ನಾಗಿ 
ತೂಗಿದ್ದೀರಿ
*   ವಾಸ್ತವವಾಗಿ ಮನುಷ್ಯ ಪ್ರಾಣಿ
ಇತರ ಜೀವಿಗಳ  ಜೀವಕ್ಕೆ ಕವಡೆ
ಕಾಸಿನ ಕಿಮ್ಮತ್ತು ನೀಡಿದೆ ಮೆರೆಯುತ್ತಿದ್ದಾನೆ.

ಪ್ರಪಂಚ  ಸಮತೋಲನ  ಇಲ್ಲದಿರೆ ಉರುಳುವುದು ಸತ್ಯ

ಎಂಬುದನ್ನು  ಅರಿತರೆ ಒಳಿತು .

ಉತ್ತಮ  ಕಥೆ  ಓದಿಸಿದಿರಿ ಧನ್ಯವಾದಗಳು .
[1/20, 1:49 PM] +91 98866 11494: ನಮಸ್ತೆ ಪ್ರೇಮ ಮೇಡಂ🙏

ನಿಮ್ಮ ಕಾಮಿಡಿ ಕವನಗಳು ಸೂಪರ್ ಮೇಡಂ.....

ನಾಯಿಯ ಬಗ್ಗೆ ಅದ್ಭುತವಾಗಿ ಬರೆದಿದ್ದೀರಿ...... ನಾಯಿಯ ನಿಯತ್ತು, ಮನೆಯ ಕಾಯುವ ಪರಿ ಮತ್ತು ಅನುಮತಿ ಇಲ್ಲದೆ ಮನೆಗೆ ಬಂದರೆ ಅದು ಕೊಡುವ ಶಿಕ್ಷೆಯ ಬಗ್ಗೆ ಉತ್ತಮವಾಗಿ ಕವನದ ಮೂಲಕ ಬರೆದಿದ್ದೀರಿ ಮೇಡಂ.......ಶುಭವಾಗಲಿ.... ಧನ್ಯವಾದಗಳು ಮೇಡಂ.

ಕೆ ಎಸ್ ಗೀತಾವಿಜಯ ಕುಮಾರ್
[1/28, 6:51 AM] Wr Shivaprasad Aradhya: ಪ್ರೇಮರವರ ಕವನ ನೀತಿ ಭೋದಕವಾಗಿದ್ದು ವಿಜ್ಞಾನ ಎಷ್ಟೇ ಬೆಳೆದರೂ ಅಹಂಕಾರ ವೂ ಅಷ್ಟೇ ಬೆಳೆಯಿತು. ಪ್ರಕೃತಿಯ ಮುಂದೆ ಅವನಾಟವೇನೂ ನಡೆಯದು.ಎಂಬುದು ಈ ಕವನದಿ ವ್ಯಕ್ತವಾಗಿದೆ.
ಬೆಳ್ಳಂಬೆಳಗ್ಗಿನ ಕವನ  ಬೇಗನೆ ಬರೆದು ಹಾಕುವ ಉಸಾಬರಿಯಲ್ಲಿ ಬರೆದಂತೆ ಕಂಡರೂ ನೀತಿ ಭೋದಕವಾಗಿದೆ. ಪ್ರಾಸ ಬರಲ್ಲಿಲ್ಲವಾ ಚಿಂತಿಸಬೇಡಿ ಮುಕ್ತವಾಗಿ ಗಪದ್ಯ ಬರೆಯಿರಿ.ಪ್ರಾಸಮಯವಾಗಿ ಬರೆಯುವ ಯತ್ನ ನಡೆಯಿತು ತಮ್ಮದು ಇರಲಿ ಹೀಗೇ ಬರೆಯುತ್ತಿರಿ ಶುಭವಾಗಲಿ 


ಶಿವಪ್ರಸಾದ್ ಆರಾಧ್ಯ
[1/28, 10:00 AM] Wr Nagamma: ಪ್ರೇಮ್ ..ಜೀ ನಮಸ್ತೆ🙏🏼.

ನೀತಿ ಕಲಿ...

ವಾಸ್ತವದ..ಅತಿಯಾಸೆಗಾಗಿ ಆಡಂಬರದ... ಬದುಕಿಗಾಗಿ..ಮಾನವ ಮಾಡುವ, ಯೋಚಿಸುವ , ಯೋಜಿಸು..ವ..ಆಯಾಮಗಳನ್ನು ...ಬಹಳ ಪ್ರಬುದ್ಧ..ಪದಗಳಲ್ಲಿ...ಕವನದೊಳಗೆ ಹಿಡಿದಿಟ್ಟ..ಪರಿಯದು..ಸೊಗಸಾಗಿದೆ...

ಧನ್ಯವಾದಗಳು.

ಎಸ್.ನಾಗಮ್ಮ🌹
[1/29, 7:21 PM] Wr Shivaprasad Aradhya: ಧರೆಯ ಮೊರೆ ನನಗೂ ಕೇಳಿತು ಪ್ರೇಮ್ ಸದಾ ಸಮಾಜಮುಖಿಯಾಗೇ ಬಡಿದೆಬ್ಬುಸುವ ಅರಿವಿನ ಕವನಗಳ ಮಾತೆ ತಾವು ಚೆನ್ನಾಗಿ ಬರೆದಿದ್ದೀರಿ ಅಭಿನಂದನೆಗಳು

ಶಿವಪ್ರಸಾದ್ ಆರಾಧ್ಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ