ಕವಯತ್ರಿ-ಪ್ರೇಮಾ ಉದಯ್ ಕುಮಾರ್
ವಿಳಾಸ- ಸಹ ಶಿಕ್ಷಕರು
ಸ.ಪ.ಪೂ.ಕಾಲೇಜು ಐವರ್ನಾಡು
ಸುಳ್ಯ ತಾಲೂಕು ದ.ಕ 574329
ಕವನದ ಶೀರ್ಷಿಕೆ- ನಾನೂ ನೀನೂ ಒಂದೇ
ಕವನ
ನನ್ನರಸಿ ನನ್ನ ಕೇಳೇ, ಕೋಪವೇಕೆ ಹೇಳೇ?
ನನ್ನರಸ ಬೇಕು ಎನಗೆ, ಹಬ್ಬಕೊಂದು ಸೀರೆ..
ಜಾಣೆ ನೀನು ಕೇಳು ನನ್ನ ಮಾತನ್ನೊಮ್ಮೆ ಇಲ್ಲಿ,
ಈಗ ಬೇಡ ಮೊದಲು ಬರಲಿ ಕೇಳಿದಂಥದ್ದಿಲ್ಲಿ! //ಪ//
ಮನಸಾರೆ ಪ್ರೀತಿಸುವೆ ನಿನ್ನ, ನನ್ನ ನಲ್ಲೆಯೇ..
ನಿನ್ನ ಪ್ರೀತಿಯಲ್ಲೆ ನಾನೂ ಬಾಳುತಿಲ್ಲವೇ?
ಮತ್ತೇಕೆ ನನ್ನ ಮನವೇ, ನೀ ಕೋಪಗೊಳ್ಳುವೇ?
ನನಗೇನು ಬೇಕು ಎಂದು ನೀ ಅರಿಯಲಿಲ್ಲವೇ!//೧//
ಬಳಿಸಾರಿ ಬಾರೇ ನನ್ನ ಮುದ್ದಿನ ಮಣಿಯೇ..
ಬರಲಾರೆ ನನ್ನ ಚಿನ್ನ, ಉಡುಗೊರೆ ಸಿಗದೆಯೇ..
ನನ್ನನ್ನೆ ನಾನು ತಂದೆ, ನಲ್ಲೆ ನಿನಗಾಗಿಯೇ..
ನನ್ನ ಬಾಳನ್ನು ಧಾರೆಯೆರೆದೆ ನಿನ್ನ ಪ್ರೇಮಕ್ಕಾಗಿಯೇ.//೨//
ತಡವೇಕೆ ನನ್ನ ನಲ್ಲೆ, ಮುನಿಸು ಏತಕೆ?
ನಾನು ಕೇಳಿದ್ದಕ್ಕೆ ಇದುವೇ ಉತ್ತರ ಸಾಕೇ?
ನನ್ನದೆಲ್ಲ ನಿನ್ನದೇನೇ, ಕೇಳೆ ನನ್ನ ರಾಣಿಯೇ..
ಚಿಕ್ಕಪುಟ್ಟ ಆಸೆಯನ್ನು ಪೂರೈಸಲಾರೆಯೇ..?//೩//
ನನ್ನ ರಾಣಿ ಕೇಳೆ ನೀನು, ನನ್ನವಳೆ ಅಲ್ಲವೇ?
ಸಿಹಿ ಮುತ್ತಿಗಾಗಿ ನೀನು ಕಾಯಿಸಲೇ ಇಲ್ಲವೇ?
ಬಾರೆ ಮುದ್ದು ನನ್ನ ಬಳಿಗೆ, ಪ್ರೀತಿ ನಿನಗೆ ಇಲ್ಲವೇ?
ನಾನು ನೀನು ಇಬ್ಬರೂ ಎಂದೂ ಒಂದೇ ಅಲ್ಲವೇ?//೪//
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ