ಶನಿವಾರ, ಮಾರ್ಚ್ 16, 2019

೮೬೧. ಕವನ- ನನ್ನೊಲವ ಹಣತೆಗೆ

ನನ್ನೊಲವ ಹಣತೆಗೆ

ಮಧುಕರನೆ ಬೆಳಗ ಅಮವಾಸ್ಯೆಗೆ ದೂಡದಿರು
ರವಿವರ್ಮನೆ ಕಲಾಕುಂಚದಿ
ಬಣ್ಣಗಳ ಅಳಿಸದಿರು..

ಮರೆವೆಂಬ ಸೆರಗಿನ ಒಳಗೆ
ಮುಖವ ತೆರೆಮರೆಯಲಿ ಹುದುಗಿಸದಿರು
ಪಾಂಡವರ ವನವಾಸದ ತೆರದಿ
ವೇಷ ಮರೆಸಿ ಜಾರದಿರು..

ಧವಸ ಬೆಳೆವ ಭೂಮಿಯಂತೆ
ಇತರರಿಗೂ ಪ್ರೀತಿಯುಣಿಸುತಿರು..
ಭೋರ್ಗರೆಯುವ ಮಳೆಹನಿಯ
ಈ ಕಡೆಗೇ ಸುರಿಯುತಿರು..

ಭಾವ ಬಳ್ಳಿ ಈಜು ರೆಕ್ಕೆ
ಪಡೆದು ದೂರ ಸಾಗುತಿರು..
ಗಾಳಿಪಟದ ರೀತಿಯಲ್ಲಿ
ಮೇಲೆ ಮೇಲೆ ಓಡುತಿರು..

ಎಲ್ಲೆ ಹೋಗು ಎಲ್ಲೇ ಇರು
ನನ್ನ ಮಾತ್ರ ತೊರೆಯದಿರು
ಒಲವ ಹಣತೆ ಬೆಳಗುತಿರು
ನನ್ನ ಜೊತೆಯಲೇ ನೀನಿರು..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ