ಸೋಮವಾರ, ಏಪ್ರಿಲ್ 20, 2020

1409. ವಿಮರ್ಶೆ-ಗೋವಿಂದಪ್ಪ ಬಡವನಹಳ್ಳಿಯವರ ಹನಿಗವನ

ಪಿ ಗೋವಿಂದಪ್ಪ* 
*ಬಡವನಹಳ್ಳಿ* ಅವರ ಹನಿ.....  

🍇ಸಾಮಾನ್ಯ ಸಮಸ್ಯೆಯ ಸುತ್ತ ಹೆಣೆದ ಹನಿಗವನವಿದು.ಕವಿಯ ಆಶಯ ಉತ್ತಮ.🍇

*ದಾಯಾದಿ ಮತ್ಸರ* 
ಒಡಲೊಂದು, ಕವಲೊಡೆದ ಕುಡಿಯರೆಡು 
ಅಳುವಾಗ ಸಂತೈಸಿ ಕಣ್ಣೊರೆಸುವ ಕೈಯೆರಡು

🍇ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿ, ಒಂದೇ ತಾಯಿ, ಮನೆಯನ್ನು ಹಂಚೆಕೊಂಡವರಿವರು. ಕುಡಿಯೆರಡು ಎಂದಾಗಬೇಕಿತ್ತು ನೋಡಿ. ಯರಡು ಆಗಿದೆ.🍇

ಮಡಿಲ ಮಮತೆ ,ಹೆಗಲ ಹರುಷ ಹಂಚಿ ಮೆರೆದವು
ಒಂದೇ ಮನ ಒಂದೇ ಜೀವದಂತೆ ಬಾಳಿದವು.

🍇ಭೂತಕಾಲದ, ಬಾಲ್ಯದ ಬದುಕನ್ನಿಲ್ಲಿ ಮೆಲುಕು ಹಾಕಲಾಗಿದೆ. ಕವಿಯ ಮನದಾಳ ಕವನ ರೂಪದಲಿ ಹೊರಹೊಮ್ಮಿದೆ.🍇

ಬಾಲ್ಯವೆಲ್ಲ ಬೇವುಬೆಲ್ಲ ಬೆರೆಸಿ ತಿಂದ ಯುಗಾದಿ
ಬಲಿತ ಮನಸು ಆಸ್ತಿಗಾಗಿ  ಹೆಸರು ಹೊತ್ತು ದಾಯಾದಿ

🍇ಬಾಲ್ಯಕ್ಕೂ, ಯೌವನಕ್ಕೂ ಹೊಂದಾಣಿಕೆ ಮಾಡಲಾಗಿದೆ. ಬುದ್ಧಿ ಇರದಾಗಿನ ಒಳ್ಳೆತನ,ಬುದ್ಧಿ ಬಂದಾಗಿನ ಕೆಟ್ಟಗುಣ ಕವಿತೆಯ ಸಾಲಿನಲ್ಲಿ ಒಡಮೂಡಿದೆ.🍇

🍇ಹನಿಯಲ್ಲೆ ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಯೊಂದರ ನೈಜ ಚಿತ್ರಣವನ್ನು ಕಟ್ಟಿಕೊಟ್ಟ ತಮ್ಮ ಹನಿಗವನ ಅರ್ಥಗರ್ಭಿತವಾಗಿದೆ ಸರ್.👌👌🍇
@ಪ್ರೇಮ್@
20.04.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ