ಸೋಮವಾರ, ಏಪ್ರಿಲ್ 6, 2020

ಸೋನೆಕವಿ ವಿಮರ್ಶೆ-1

*ಪ್ರೇಮಕ್ಕನವರ*

~ಮನ ಕವಿತೆಯಲ್ಲಿ~
ಮದುವೆಯಾದ
ಹೆಣ್ಣು ಗಂಡಿನ ಮನಸ್ತಿತಿಗಳ ಚಹರೆಯೊಳಗೆ ಬದುಕಿನ  ಸಮಸ್ಯೆಗಳನ್ನು ಮುಂದಿಟ್ಟು ನಮ್ಮ ಮನೆ ಒಲೆ ತುತ್ತು ಎನ್ನುವ ರಗಳಯಲ್ಲಿ,
ಉತ್ತರಿಸಲಾಗದ ಸ್ಥಿತಿಯ ಭಾವನೆಗಳಿಗೆ ಬೆಲೆ ಇಲ್ಲದಂತೆ ಸೊರೆಯಾಗುತಿರುವ ನೆರಳಿದೆ, 

೦೧]
ಗಂಡ ಹೆಂಡತಿಯ ಬೇಸರಿಕೆ,  ಗೊಂದಲತೆ, 
ಸಮಸ್ಯೆಗಳನಿಟ್ಟುಕೊಂಡು ಸಮಾಜದ ದ್ವಿಮುಖ ಪ್ರಕ್ರಿಯೆಯನ್ನು ಪ್ರಸ್ತುತವಾಗಿ ಹೇಳುವ ದೊಡ್ಡತನಯಿದೆ,

೦೨]
ಪತಾಯನ್ನು ಪೂಜಿಸುತ್ತಿದವಳ ಹೃದಯರಂಗ ಯಾವುದೋ ಕಾರಣಗಳಿಂದ ನೊಂದು,
ಎಲ್ಲವನ್ನು ತ್ಯಜಿಸುವ ತವಕದಲ್ಲಿ ತನ್ನ  ಆತ್ಮ ತೃಪ್ತಿಯನ್ನೆ ಹಾಳು ಮಾಡುವ ಅನಾಗರಿತೆಯ ಸಂಸ್ಕೃತಿಯ ನೆರಳಿದೆ.

೦೩]
ಹೆಣ್ಣಿನ  ಭಾವನಾತ್ಮಕ ಸಂವೇದನೆಗಳು 
ಭಾವ ತುಂಬಿ ಅಳುವ ಚಹರೆಯೊಂದಿಗೆ ದಾರಿ ಹಿಡಿದು  ದೂರು ನೀಡುತಿರುವ ಅಸಂಸ್ಕೃತಿಯತ್ತ ಧಾವಿಸುವ ಪರಿಪಾಠವಿದೆ.

೦೪]
ಬದುಕು ಬಂಗಾರವಾಯ್ತು ಬಾಳು ಹಸನಾಯ್ತು ಎನ್ನುವ ಹೃದಯಗೀತೆಗೆ ಈ ಭಾವಗೀತೆ
 ಮುನಿದುಕೊಂಡಿದೆ,

೦೫]
ಬುದ್ಧಿ ಹೇಳುವ  ಮನಸ್ತಿತಿಗಳನ್ನು ತಿರಸ್ಕರಿಸಿ 
ತನ್ನ ಹಠದೊಳಗೆ ಮಠ ಕಟ್ಟುವ,
ಏನನ್ನೋ ಸಾಧಿಸುವ ದಿಕ್ಕಿನಲ್ಲಿ ಚಲಿಸುವಂತಿದೆ, 
 

೦೬]
*ಗಂಡು ಹೆಣ್ಣಿನ*
*"ಸಂಸಾರದ ಗುಟ್ಟು ವ್ಯಾದಿ ರಟ್ಟು"* ಎನ್ನುವಂತೆ ಆ ನೀತಿಗೆ ವಿರುದ್ಧವಾಗಿದೆ.

೦೭]
*"ಪುಟ್ಟ  ಸಂಸಾರ  ಆನಂದ ಸಾಗರ"* ಎನ್ನುವ  ಮಾತಿಗೆ ಆಸ್ತಿ, ಮನೆ ಜಾಗ.ತೋಟ, ಬಟ್ಟೆ  ಬರೆ,
ಎನ್ನುವ  ಪ್ರತಿಮೆಗಳಿಗೆ ಮೀಸಲಾಗದೆ, ಅವಳ ಭಾವನೆಗಳು ಸತ್ತು ಹೋಗಿವೆಯಂತೆ !
ಬದುಕುವ ಆಸೆ
ಅವಳಿಗಿಲ್ಲಂತೆ !
ಎನ್ನುವ  ಅತಿಯಾದ ಪ್ರೀತಿಯನ್ನು ಬೇಸರದಿಂದಲೆ ಹೇಳುತಿದೆ. 

ಒಟ್ಟಾರೆ 
ಕೊನೆಯಲ್ಲಿ ಮಾತ್ರ ಈ ಕವಿತೆಗೆ ಕೊಟ್ಟ ಕಾರಣ ,
ಇದರೊಳಗಿರುವ ಮಾತುಗಳಿಗೆ, ಭಾವನೆಗಳಿಗೆ ಸರಿ ಹೊಂದುವುದಿಲ್ಲ, 
ಅದಕ್ಕೆ  ಬಲವಾದ ಕಾರಣಗಳನ್ನು ಪೋಷಿಸಿದರೆ ಒಳಿತು ಎನಿಸಿತು.

ಇದಲ್ಲದೆ 
ಹೆಣ್ಣು  ಗಂಡಿನ ಮನಸ್ಥಿತಿಗಳ ಚಹರೆಯೊಳಗ ,
ಈ ಕವಿತೆಯಲ್ಲಿ ಮೇಲ ನೋಟಕ್ಕೆ ಹೆಣ್ಣು  ಹೇಳುವಂತೆಯೆ ಇದೆ.
ಆದರೆ  ಅದು ರಹಸ್ಯವಾಗಿಟ್ಟಿರುವ ತಂತ್ರಗಾರಿಕೆ ಒಪ್ಪಿತ, 


ಧನ್ಯವಾದ.

#ಸೋನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ