*ಪ್ರೇಮಕ್ಕನವರ*
~ಮನ ಕವಿತೆಯಲ್ಲಿ~
ಮದುವೆಯಾದ
ಹೆಣ್ಣು ಗಂಡಿನ ಮನಸ್ತಿತಿಗಳ ಚಹರೆಯೊಳಗೆ ಬದುಕಿನ ಸಮಸ್ಯೆಗಳನ್ನು ಮುಂದಿಟ್ಟು ನಮ್ಮ ಮನೆ ಒಲೆ ತುತ್ತು ಎನ್ನುವ ರಗಳಯಲ್ಲಿ,
ಉತ್ತರಿಸಲಾಗದ ಸ್ಥಿತಿಯ ಭಾವನೆಗಳಿಗೆ ಬೆಲೆ ಇಲ್ಲದಂತೆ ಸೊರೆಯಾಗುತಿರುವ ನೆರಳಿದೆ,
೦೧]
ಗಂಡ ಹೆಂಡತಿಯ ಬೇಸರಿಕೆ, ಗೊಂದಲತೆ,
ಸಮಸ್ಯೆಗಳನಿಟ್ಟುಕೊಂಡು ಸಮಾಜದ ದ್ವಿಮುಖ ಪ್ರಕ್ರಿಯೆಯನ್ನು ಪ್ರಸ್ತುತವಾಗಿ ಹೇಳುವ ದೊಡ್ಡತನಯಿದೆ,
೦೨]
ಪತಾಯನ್ನು ಪೂಜಿಸುತ್ತಿದವಳ ಹೃದಯರಂಗ ಯಾವುದೋ ಕಾರಣಗಳಿಂದ ನೊಂದು,
ಎಲ್ಲವನ್ನು ತ್ಯಜಿಸುವ ತವಕದಲ್ಲಿ ತನ್ನ ಆತ್ಮ ತೃಪ್ತಿಯನ್ನೆ ಹಾಳು ಮಾಡುವ ಅನಾಗರಿತೆಯ ಸಂಸ್ಕೃತಿಯ ನೆರಳಿದೆ.
೦೩]
ಹೆಣ್ಣಿನ ಭಾವನಾತ್ಮಕ ಸಂವೇದನೆಗಳು
ಭಾವ ತುಂಬಿ ಅಳುವ ಚಹರೆಯೊಂದಿಗೆ ದಾರಿ ಹಿಡಿದು ದೂರು ನೀಡುತಿರುವ ಅಸಂಸ್ಕೃತಿಯತ್ತ ಧಾವಿಸುವ ಪರಿಪಾಠವಿದೆ.
೦೪]
ಬದುಕು ಬಂಗಾರವಾಯ್ತು ಬಾಳು ಹಸನಾಯ್ತು ಎನ್ನುವ ಹೃದಯಗೀತೆಗೆ ಈ ಭಾವಗೀತೆ
ಮುನಿದುಕೊಂಡಿದೆ,
೦೫]
ಬುದ್ಧಿ ಹೇಳುವ ಮನಸ್ತಿತಿಗಳನ್ನು ತಿರಸ್ಕರಿಸಿ
ತನ್ನ ಹಠದೊಳಗೆ ಮಠ ಕಟ್ಟುವ,
ಏನನ್ನೋ ಸಾಧಿಸುವ ದಿಕ್ಕಿನಲ್ಲಿ ಚಲಿಸುವಂತಿದೆ,
೦೬]
*ಗಂಡು ಹೆಣ್ಣಿನ*
*"ಸಂಸಾರದ ಗುಟ್ಟು ವ್ಯಾದಿ ರಟ್ಟು"* ಎನ್ನುವಂತೆ ಆ ನೀತಿಗೆ ವಿರುದ್ಧವಾಗಿದೆ.
೦೭]
*"ಪುಟ್ಟ ಸಂಸಾರ ಆನಂದ ಸಾಗರ"* ಎನ್ನುವ ಮಾತಿಗೆ ಆಸ್ತಿ, ಮನೆ ಜಾಗ.ತೋಟ, ಬಟ್ಟೆ ಬರೆ,
ಎನ್ನುವ ಪ್ರತಿಮೆಗಳಿಗೆ ಮೀಸಲಾಗದೆ, ಅವಳ ಭಾವನೆಗಳು ಸತ್ತು ಹೋಗಿವೆಯಂತೆ !
ಬದುಕುವ ಆಸೆ
ಅವಳಿಗಿಲ್ಲಂತೆ !
ಎನ್ನುವ ಅತಿಯಾದ ಪ್ರೀತಿಯನ್ನು ಬೇಸರದಿಂದಲೆ ಹೇಳುತಿದೆ.
ಒಟ್ಟಾರೆ
ಕೊನೆಯಲ್ಲಿ ಮಾತ್ರ ಈ ಕವಿತೆಗೆ ಕೊಟ್ಟ ಕಾರಣ ,
ಇದರೊಳಗಿರುವ ಮಾತುಗಳಿಗೆ, ಭಾವನೆಗಳಿಗೆ ಸರಿ ಹೊಂದುವುದಿಲ್ಲ,
ಅದಕ್ಕೆ ಬಲವಾದ ಕಾರಣಗಳನ್ನು ಪೋಷಿಸಿದರೆ ಒಳಿತು ಎನಿಸಿತು.
ಇದಲ್ಲದೆ
ಹೆಣ್ಣು ಗಂಡಿನ ಮನಸ್ಥಿತಿಗಳ ಚಹರೆಯೊಳಗ ,
ಈ ಕವಿತೆಯಲ್ಲಿ ಮೇಲ ನೋಟಕ್ಕೆ ಹೆಣ್ಣು ಹೇಳುವಂತೆಯೆ ಇದೆ.
ಆದರೆ ಅದು ರಹಸ್ಯವಾಗಿಟ್ಟಿರುವ ತಂತ್ರಗಾರಿಕೆ ಒಪ್ಪಿತ,
ಧನ್ಯವಾದ.
#ಸೋನೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ