ಸೋಮವಾರ, ಏಪ್ರಿಲ್ 6, 2020

ಖುಷಿ ಕೃಷ್ಣರ ಅನಿಸಿಕೆ

*ಹೀಗೊಂದು ಹಾರೈಕೆ..*

ಭಾವ ಜೀವದ ಯಾನ...
ಈ ಹೆಸರು ಕೇಳಿದ ತಕ್ಷಣ ಎದೆಯೊಳಗೆ ಭಾವನೆಗಳು ಮೂಡಲು ಪ್ರಾರಂಭಿಸುತ್ತವೆ.
ಮೂಡಿದ ಭಾವನೆಗಳೆಲ್ಲಾ ಜೊತೆಯಾಗಿ ಸಾಗಲು ಪ್ರಾರಂಭಿಸುತ್ತವೆ.ಭಾವನೆಗಳ ಪ್ರಯಾಣ ಕನಸಿನ ಲೋಕಕ್ಕೆ ರಹದಾರಿಯಾಗಿಬಿಡುತ್ತದೆ.
ಇಂತಹ ಭಾವನೆಗಳ ಲೋಕದಲ್ಲೊಂದು ಸುತ್ತು ಪ್ರಯಾಣ ಪ್ರಾರಂಭಿಸುವುದಾದರೆ...
ಅದು ಅತಿಸುಲಭದ ದಾರಿಯೊಂದಿದೆ ಅದೆ...
ಪ್ರೇಮ ಉದಯ್ ಕುಮಾರ್ ರವರ ಕವನ ಸಂಕಲನ ಭಾವಜೀವ ಯಾನ.
ಇವರ ಈ ಕವನ ಸಂಕಲನದ ಪ್ರತಿ ಕವನಗಳು ಭಾವನೆಗಳೊಂದಿಗೆ ಬೆಸೆದುಕೊಂಡಿವೆ....
ಓದುಗರನ್ನು ಭಾವನಲೋಕಕ್ಕೆ ಕರೆದೋಯ್ಯುವುದರ ಜೊತೆಗೆ ಓದಿನ ಖುಷಿಯನ್ನು ಎದೆಯೊಳಗೆ ಉಳಿಸಿಬಿಡುತ್ತವೆ..
ಇತ್ತೀಚಿನ ದಿನಗಳಲ್ಲಿ ಕನ್ನಡದ ಸಾಹಿತ್ಯ ಲೋಕದಲ್ಲಿ ಭರವಸೆಯ ಕವಯತ್ರಿಯಾಗಿ ಪ್ರೇಮ ಉದಯ್ ಕುಮಾರ್ ರವರ ಮುಂಚೂಣಿಯಲ್ಲಿದ್ದು ಇವರ ಕವನ ಸಂಕಲನ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ಸೇರಿಕೊಳ್ಳುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯೂ ಹೌದು.
ಇವರ ಕವನಗಳು ಸಂಕಲನವು ಕನ್ನಡ ಸಾಹಿತ್ಯ ಲೋಕದಲ್ಲಿ ಸದಾ ಧೃವತಾರೆಯಂತೆ ಹೊಳೆಯುತ್ತಿರಲಿ...
ಕವಯತ್ರಿ ಪ್ರೇಮ ಉದಯ್ ಕುಮಾರ್ ರವರಿಗೆ ಶುಭವಾಗಲೆಂದು ಹಾರೈಸುತ್ತೇನೆ..
ಅತ್ಯಂತ ಗೌರವದಿಂದ 

ಖುಷಿಕೃಷ್ಣ 
ಮೊಬೈಲ್- 9964649325
✍ *ಪ್ರೇಮ್ ಎನ್ನುವ ಭರವಸೆಯ ಹುಟ್ಟುಹಾಕುತ್ತಿರುವ ಕವಯತ್ರಿ*
ಸ್ವ ವಿಮರ್ಶೆಯ ಜೊತೆಗೆ ಚೆಂದದ ಹನಿಗವನಗಳನ್ನು ಬರೆದು...
ಹನಿಹನಿಇಬ್ಬನಿ ಗೆ ಕೊಡುಗೆ ನೀಡಿದ ಕವಯತ್ರಿಯವರಿಗೆ ಧನ್ಯವಾದಗಳು....
ಇವರ ಬರಹಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ  ಪ್ರಬುದ್ಧ ಕವಿಯತ್ರಿಯೊಬ್ಬರು ಕನ್ನಡ ಸಾಹಿತ್ಯ ಲೋಕದಲ್ಲಿ ಕಾಣಿಸಿಕೊಳ್ಳುವ ಮತ್ತು ಶಾಶ್ವತವಾಗಿ ನೆಲೆ ನಿಲ್ಲುವ ಎಲ್ಲ ಲಕ್ಷಣಗಳು ಕಾಣುತ್ತಿರುವುದು ಖುಷಿಯ ಸಂಗತಿ....
ನಿರಂತರತೆ ಮತ್ತು ಬರವಣಿಗೆಯ ಬೆನ್ನು ಹತ್ತಿದರೆ ಯಶಸ್ಸು ಖಂಡಿತಾ ನಿಮ್ಮ ಅಂಗೈಯೊಳಗೆ ನಲಿದಾಡಲಿದೆ .
ನಿಮ್ಮ ಭರವಸೆಯ ಬರವಣಿಗೆ ಹೀಗೆ ನಿತ್ಯ ನಿರಂತರವಾಗಿ ಜಾರಿಯಲ್ಲಿರಲೆಂದು ವಿನಂತಿಸುತ್ತೇನೆ....
ಧನ್ಯವಾದಗಳೊಂದಿಗೆ 
ಅತ್ಯಂತ ಪ್ರೀತಿಯಿಂದ 
ಸಾಮಾನ್ಯ ಸಾಹಿತ್ಯ ಸೇವಕ 
✍ಖುಷಿಕೃಷ್ಣ ✍

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ