ಮುಕುಟ
ಭಾರತಕ್ಕೆಂದೂ ಕಾಶ್ಮೀರ ಮುಕುಟ
ರಕ್ಷಣೆಗೆಮ್ಮಯ ಯೋಧರೆ ಮುಕುಟ..
ರಕುತದ ಕೋಡಿಯ ಹರಿಸಾದರು ಸಾವು
ಬಿಡಲೊಲ್ಲೆವು ಕಳ್ಳ ಭಯೋತ್ಪಾದಕರ ನಾವು..
ಭಾರತ ಮಾತೆಯ ಕಿರೀಟವ ಉಳಿಸಲು
ಹುತಾತ್ಮ ಯೋಧರ ಆತ್ಮಕೆ ಶಾಂತಿಯ ತರಲು
ಹಗಲು ಇರುಳು ಶತೃವಿನೊಡೆ ಹೋರಾಡಿ
ಗಡಿಯಲಿ ಶಾಂತಿಯ ಮಂತ್ರವ ಕಾಪಾಡಿ...
ಜೀವವ ಕೊಡುವೆವು ಕಾಶ್ಮೀರವ ಬಿಡೆವು
ಸತ್ಯ ಶಾಂತಿಯಲಿ ಸದಾ ಬದುಕುವೆವು
ಬಲಿಯನು ಪಡೆವವಗೆ ಬುದ್ಧಿಯ ಕಲಿಸುವೆವು
ತಂಟೆಗೆ ಬಂದರೆ ಎಂಟೆದೆ ತೋರುವೆವು...
ದೇಶದ ಸೇವೆಗೆ ಬದುಕನು ನೀಡುತ
ತಮ್ಮಯ ಮಕ್ಕಳ ಸೇನೆಗೆ ಕಳಿಸುತ
ಆಗಿರುವಿರಿ ನೀವು ತ್ಯಾಗದ ಸಂಕೇತ
ನಮಿಪೆವು ನಾವು ಯೋಧಗೆ ಸತತ..
@ಪ್ರೇಮ್@
27.02.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ