10. ಶ್ರೀಮತಿ ಜೋಶಿ ನಿಸರಾಣಿಯವರ
*ಭಾವ ತರಂಗ*
ಅಂದು ಹೃದಯದ
ಕವಾಟದ ಒಳಗೆ ಚಿಮ್ಮುತ್ತಿತ್ತು ಪ್ರೀತಿಯ ವಸಗೆ !!
ದುಮ್ಮಿಕ್ಕಿ ಹೊರ ಹೋಗದಂತೆ ಹಾಕಬೇಕಿತ್ತು ಬೀಗ ಭದ್ರಪಡಿ ಸುವಂತೆ.!!೧!
🍍🍍🍍🍍🍍🍍
ಸುಂದರ ಆಲೋಚನೆಗಳು. ಬರುವಾಗ ತಡವಾಯ್ತು. ಸಾಲುಗಳ ಸೂಕ್ಷ್ಮ ಕಟ್ಟುವಿಕೆ, ಉತ್ತಮ ಕವಿಭಾವಕ್ಕೆ ನಮನಗಳು.
🍍🍍🍍🍍🍍🍍
ಮನಸ್ಸೆಂಬ ಕೀಲಿ ಕೈ ನ ಜೋಪಾನ ಮಾಡಬೇಕಿತ್ತು !!
ಸಂಶಯದ ಮೇಜಿನ ಮೇಲೆ ದಪ್ಪಂತ ಎಸೆದು ಆಗಿತ್ತು. !!೨!!
🍍🍍🍍🍍🍍🍍
ವಾವ್ ....ಉಪಮೆ ಸೂಪರ್.ಎಂಥ ಕಂಪಾರಿಸನ್..ಇಷ್ಟ ಆಯ್ತು ಸಾಲುಗಳು.
🍍🍍🍍🍍🍍
ಒಡೆದ ಕನ್ನಡಿಯೊಳಗೆ ಕಾಣುತಿದೆ ಹಲವು ಪ್ರತಿಬಿಂಬ !!
ಹರಿ ಹಾಯುತಿದೆ ಚಿತ್ತದಲ್ಲಿ ಏರಿಳಿತದ ದ್ವಂದ್ವ. !!೩!!
🍍🍍🍍🍍🍍🍍🍍
ಇಲ್ಲಿನ ಕವಿಭಾವ ಸೂಪರ್. ಮನುಜನ ಮೆದುಳನ್ನು ಇದುವರೆಗೂ ಯಾರೂ ಅಳೆದವರಿಲ್ಲ. ಹಲವಾರು ಆಲೋಚನೆಗಳ ಗೂಡದು. ರೂಪಕ ಉತ್ತಮ.
🍍🍍🍍🍍🍍🍍
ಕ್ಷಣದ ವಿವೇಕ ಶೂನ್ಯದ ವೇಗ ಚೂರಾಗಿಸಿದೆ ಕೋಣೆಗಳ ಜಾಗ!!
ಬುದ್ದಿ ತಾ ಎಚ್ಚರಿಸುತ್ತದೆ ಈಗ ನಂಬಿಕೆಯೇ ಜೀವನದ ಭಾಗ!!೪!!
🍍🍍🍍🍍🍍🍍
ಖಂಡಿತಾ. ನಂಬಿಕೆ ಇಲ್ಲದ ಮೇಲೆ ಏನಿಲ್ಲ. ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ... ಎಂಬ ಮೇರುಕವಿಯ ಸಾಲುಗಳು ನೆನಪಾಗುತ್ತಿವೆ.
🍍🍍🍍🍍🍍🍍
ವಿಲಕ್ಷಣ ಸಂದಿಗ್ದ ಸ್ಥಿತಿ ಯಲ್ಲಿ ಹೋರಾಟಕ್ಕಿಳಿದು ಆಗಿತ್ತು !!
ರೋಷ ತಿಳಿಯಾಗಿ ಎಸೆದ ಕೀ ಹುಡುಕಿ ಮರಳಿ ತರುವ ಬಯಕೆಯಾಯ್ತು
🍍🍍🍍🍍🍍
ಕವನದ ಕೊನೆ ಸೂಪರ್. ರೋಷ ತಿಳಿಯಾದಾಗ ಕಣ್ಣಾರೆ ನೋಡಿದರೂ ಪರಾಂಬರಿಸಿ ನೋಡು, ಹೇಳಿದ್ದು ಸುಳ್ಳಾಗಬಹುದು....ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು....
ಕೊನೆಯಲ್ಲಿ ಭಾಷಾ ಚಿಹ್ನೆ ಉಪಯೋಗಿಸಿ ಕವಿಗಳೇ. ಅದು ಮತ್ತಷ್ಟು ಇಫೆಕ್ಟಿವ್.
🍍🍍🍍🍍🍍
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ