ಭಾವಗೀತೆ-ಕರೆ
ನನ್ನ ಎದೆಗೆ ಪ್ಲಾಸ್ಟಿಕನ್ನು
ಎಸೆಯಬೇಡಿ ಜನರುಗಳೇ..
ನನ್ನ ಕೊಳವೆ ಬಾವಿ ತೋಡಿ
ಕೊರೆಯದಿರಿ ಮಕ್ಕಳೇ..
ನೀರು ಮರವು ಪ್ರಾಣಿ ಪಕ್ಷಿ
ನಿಮಗೆ ತಾನೇ ಬೇಕಿದೆ?
ನನ್ನ ಮೇಲೆ ಬೆಳೆದ ಫಲವು
ತಮಗೆ ತಾನೆ ಬದುಕಿಗೆ...
ಅನ್ನ ನೀರು ಗಾಳಿ ಮಣ್ಣ
ನೀವೆ ವಿಷವ ತುಂಬಿಸಿ
ತನ್ನ ಆರೋಗ್ಯವ ತಾನೆ ಕೆಡಿಸಿ
ಬಳಲಿ ಬೆಂಡಾದಿರಿ...
ಮಾತೆ ಚರಣ ಕಮಲದಲ್ಲಿ
ಗಿಡ ಮರವ ಬೆಳೆಸಿರಿ
ಶುದ್ಧ ಗಾಳಿ ಶುದ್ಧ ನೀರು
ಪಡೆದು ಚಂದದಿ ಬದುಕಿರಿ..
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ