ತಲ್ಲಣ
ಇಳೆಯ ಕಂಪನ ಮನದಿ ತಲ್ಲಣ
ತರದೆ ಬಾಳಲಿ ನೋವ ಸಿಂಚನ?
ಮನದಿ ನಡುಕ ಇಳೆಯ ಸಿಡುಕ
ತನನ ಜಗದ ಜೀವಿ ಕಣಕಣ//
ಬುವಿಯು ಬಿರಿಯಲು ಮನದಿ ಭಯವು
ಬದುಕ ನುಂಗಲು ತವಕ ಬಹಳವು!
ತಾಯ ಒಡಲಲೆ ಬೆಂಕಿಯುಂಡೆಯು
ಕುದಿವ ಮಾತೆಯ ಉದರದೊಲವು//
ಹೃದಯ ಢವಢವ ಒಡೆವ ಕಾವು!
ಮನದಿ ಸಂಕಟ ನಿತ್ಯ ನೋವು!!
ಗೆಲುವ ಮರೆವ ಜೀವ ಸಾವು!
ಮೌನದಲೆ ಕಳೆವ ಸಕಲ ನೋವು//
ಜೀವ ಭಾವದ ಆರ್ದ್ರ ನರ್ತನ
ಕೆಲಸ ಇಹುದು ಸೃಷ್ಠಿ ಕರ್ತನ!
ಧರೆಯ ನಡುಗಿಸೆ ಕಡಲ ಉಕ್ಕಿಸೆ!
ಸಕಲ ಸಾಗರ ನೀರ ಉಕ್ಕಿಸೆ..//
ಇಳೆಯ ಕಾರ್ಯಕೆ ಎಂದೂ ಧನ್ಯನು
ಕೊಳೆಯ ತೊಲಗಿಸೆ ಸದಾ ಮಾನ್ಯನು
ತಾಳ್ಮೆ ಮಿತಿಯಲಿ ತಾಯಿ ನಡೆಯಲು
ಏರಿ ಬಿಸಿಯು ಮಾತೆ ನಡುಗಲು//
@ಪ್ರೇಮ್@
05.04.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ