ಗುರುವಾರ, ಏಪ್ರಿಲ್ 18, 2019

931. ಯಮನಿಗೆ ಸಲಹೆ

ಬರಬೇಡ...

ಯಮ ಧರ್ಮನೇ ನನಗೆ ತಿಳಿದಿದೆ
ಒಂದಲ್ಲ ಒಂದು ದಿನ ಬರುವೆ ನೀ
ಆಲಂಗಿಸಿಕೊಳ್ಳಲು ಜೀವನದಿ ನನ್ನ  !!
ಅಂದಿಗೇ ನಿಲ್ಲಿಸುವೆ ನನ್ನ ಉಸಿರನ್ನ!

ಯಾರೂ ನೋಡಿಲ್ಲ ನೀನು ಬಾಣಲಿಯಲಿ ಹಾಕಿ
ಪಾಪಿಗಳ ದೇಹವ ಕುದಿಸುವುದನ್ನ!
ನಾವೇನು ಮೂರ್ಖರೇ ನಂಬಲು
ಈ ಎಲ್ಲಾ ಕಟ್ಟು ಕತೆಗಳನ್ನ!!

ಬಳ್ಳಾರಿ ಸೆಕೆಗೆ, ರಾಸಾಯನಿಕಗಳ ಊಟಕ್ಕೆ
ನನ್ನ ದೇಹವ ಸದೃಡಗೊಳಿಸಿಕೊಂಡಿರುವೆ!
ಮಲಿನ ನೀರಾದರೂ ಕುಡಿದು!
ರೋಗಗಳು ಬರದಂತೆ ಆಂಟಿಬಯಾಟಿಕ್ ತಿಂದು!!

ನಿನಗೇನು ಮಹಾ ಗೊತ್ತು, ಇಂದಿನ ಭೂಲೋಕದ ಜನರ ಬಗ್ಗೆ?
ನಿನ್ನ ಕಾಲನ್ನೇ ಕಟ್ಟಿ ಬಾಣಲೆಯ
ಒಳಗೆ ಹಾಕಿ ಬಿಟ್ಟಾರು ಜೋಕೆ!!!

ಮಹಾನ್ ಕಳ್ಳ ಕದೀಮರು ಎನಿಸಿಕೊಂಡವರು
ಪೊಲೀಸ್, ಸಿಬಿಐ ಕೋರ್ಟ್ ಬಿಡು,
ನಿನಗೂ ದುಡ್ಡು ಕೊಟ್ಟು ಮರುಳು ಮಾಡಿಬಿಟ್ಟಾರು!

ನೀನಿನ್ನು ಭೂಮಿಗೆ ಬರುವಾಗ
ಬಹಳ ಜಾಗೃತನಾಗಿ ಬರಬೇಕು!
ಬೇಕೆಂದರ ಕೋಣವಲ್ಲ, ಬುಲೆಟ್ ಪ್ರೂಫ್
ಕಾರು, ಜಾಕೆಟ್, ಕನ್ನಡಕವೂ ತರಬೇಕು!

ಜನ ನಿನ್ನೇ ಸಾಯಿಸದೆ ಬಿಟ್ಟರೆ
ಅದುವೇ ನಿನ್ನ ದೊಡ್ಡ ಪುಣ್ಯ!
ವಿದ್ಯುತಲ್ಲೆ ಸುಟ್ಟು ಮಾಡಿಯಾರು ಬೂದಿ
ನಿನ್ನ ಬೃಹತ್ ಗಾತ್ರದ ದೇಹವನ್ನ!

ಬರಬೇಡ ನೀನೊಬ್ಬನೇ ಜತೆಯಿಲ್ಲದೆ,
ಈ ಧರೆಯೊಡಲಿಗೆ ನೀನೀಗ!
ಜನ ಸಾಯುವರು ತಮ್ಮಷ್ಟಕೆ  ತಂತಾನೇ
ಪರಿಸರವ ಎಲ್ಲೆಡೆ ಎಡೆಬಿಡದೆ ಕೆಡಿಸೀಗ!

@ಪ್ರೇಮ್@
16.04.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ