ಶುಕ್ರವಾರ, ಜನವರಿ 29, 2021

ತ್ರಿಪದಿಗಳು

ತ್ರಿಪದಿಗಳು

ಮನುಜನೆ ನಿಜವನು ಹೇಳಲು ಜನಿಸಿಹೆ
ತನುವದು ಸನಿಹದಿ ಬಾಳಲು ತವಕಿಸೆ
ಕನಸಲು ಕಾಯಲು ದೇವನೆ ಬೇಕಿದೆ

ಮನದಲಿ ಇರುವುದ ಹೇಳಲು ಬೇಕಿದೆ
ಜನರಲಿ ಕೋಪವ ತಡೆಯಲು ಬೇಕಿದೆ
ದನಗಳ ಹಾಗೆಯೆ ಸಹಕಾರ ಬೇಕಿದೆ

ಮನೆಯಲು ಪ್ರೀತಿಯು ಸಿಗುವುದು ಬೇಕಿದೆ
ಕೊನೆಯ ವರೆಗೂ ಮನಸದು ಬೇಕಿದೆ
ತನ್ಮಯತೆ ಭವದಲಿ ಆಳಲು ಬೇಕಿದೆ..
@ಪ್ರೇಮ್@
11.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ