ಶುಕ್ರವಾರ, ಜನವರಿ 1, 2021

ವಿಮರ್ಶೆಗಳು-4


[1/2, 4:02 PM] Nybr Pramila: *ಇಂದು ನಾಳೆಗಳೊಡನೆ*

ಪ್ರೇಮ್ ಜಿ ಯವರ ಭಾವ ಗೀತೆ.... 

ಗೀತೆಯ ಆರಂಭವೆ ವಾವ್ ಎನ್ನುವ ಹಾಗಿದೆ. 

ನಾಳೆಗಳ ನಾಳೆಯಲಿ 
ಇಂದೇಕೆ ಬದುಕುವಿರಿ
ಇಂದಿನೈಸಿರಿ ಸೊಬಗ
ಇಂದೇ ಅನುಭವಿಸಿ....

ವಾವ್... ಎಂಥಹ  ಸೊಗಸಾದ ಸಾಲುಗಳು.

ನಾಳೆಗೆ  ನಾಳೆಗೆ  ಎಂದು ಎಲ್ಲವನ್ನು ಮಂಡೆ ಬಿಸಿ ಮಾಡಿಕೊಂಡು ದಿನ ಹಾಳು ಮಾಡಿ ಕೊಳ್ಳುವುದಕ್ಕಿಂತ 
ಇಂದು ಚಂದದಿಂದ ಬದುಕಿ ಬಿಡಬೇಕು.

ಇಂದು ಇಂದಿಗೆ ನಾಳೆ ನಾಳೆಗೆ 
ಇಂದು ನಮ್ಮದೇ ಚಿಂತೆ ಯಾತಕೆ..ಅಲ್ವ??? 

ತುಂಬಾ ಚಂದ ಬರೆದಿರುವಿರಿ ಜಿ 
ಶುಭವಾಗಲಿ, 

ನಿಮ್ಮ  ಸಾಹಿತ್ಯ ಯಾನ ಹೀಗೆ ಮುಂದುವರಿಯಲಿ🌹🌹🌹🌹
[1/8, 6:47 AM] @PREM@: ನನ್ನ ಹೆಮ್ಮೆ

ಹಚ್ಚ ಹಸುರಿನ ಸ್ವಚ್ಛ ಹಳ್ಳಿಯು
ನನ್ನದೆ ಆಗಿಹುದು
ಹಾಲನು ಹೊತ್ತ ಎತ್ತಿನ ಗಾಡಿಯು
ಪಟ್ಟಣಕೋಡಿಹುದು .

ಭತ್ತದ ಗದ್ದೆಯು ನಮಗಾಗೆಂದೂ
ಊಟವ ನೀಡಿತ್ತು!
ಮನೆಯಲಿ ದನಕರು ಹೋರಿಯೂ ಕೂಡಾ
ಸಂತಸದಲಿ ನಲಿದಿತ್ತು..

ಗದ್ದೆಯ ಉಳುಮೆಗೆ ನಾನೂ ಹೋಗುವೆ
ಅಪ್ಪನ ಹೆಗಲಲ್ಲಿ
ಹಾರುತಲಿರುವ ಚಿಟ್ಟೆಯ ಹಿಡಿವೆ
ಅಕ್ಕನ ಜೊತೆಯಲ್ಲಿ..

ಎತ್ತಿನ ಬಂಡಿಯು ಪೇಟೆಗೆ ಹೋಗಲು
ಮಾವನ ಕೈಹಿಡಿದು..
ಕೈಯಲಿ ತುಂಬಾ ಕಡಲೇಕಾಯಿ
ತಿನ್ನುತ ನಾ ನಡೆದು..


ಪ್ರತಿದಿನ ಕೆರೆಯಲಿ ಸ್ನಾನವ ಮಾಡಿ
ಉಲ್ಲಾಸ ಮನಕೆಲ್ಲಾ..
ನಮ್ಮಯ ಹಳ್ಳಿಯ ಅಂದವ ಕಂಡು
ಹೆಮ್ಮೆ ನಮಗೆಲ್ಲಾ..
@ಪ್ರೇಮ್@
08.01.2020
[1/8, 9:11 AM] Wr Siraj Ahmed Soraba: ಚಿತ್ರಕ್ಕೆ ಹೊಂದುವಂತೆ ಬರೆದಿರುವ ಸೊಗಸಾದ ಬರುಹ ತಮಗೆ ಅನಂತಾನಂತ ಅಭಿನಂದನೆಗಳು
[1/8, 9:26 AM] Wr Kumar Chalawadi: @ಪ್ರೇಮ್@ ರವರ ಹನಿ ಚೆನ್ನಾಗಿದೆ! ಸಮಯದ ಜೊತೆ ನಾವೆಲ್ಲ ನಾಗಾಲೋಟದಲ್ಲಿ ಓಡುತ್ತಲೇ ಇದ್ದೇವೆ! 
ತಾಳ್ಮೆ ಇಲ್ಲವೇ ಇಲ್ಲ! ಸರಿಯಾಗಿ ಸಾಗಿದರೆ ಬಾಳು ಸುಂದರ! ಸಂಯಮ ಮೀರಿದರೆ ಬದುಕೆಲ್ಲ ಬರೀ ಗೋಳು! ಚೆಂದದ ಹನಿ👌
[1/8, 10:18 AM] Wr Vinuta Kicchikeri: ಬೇಕು

ಓಡುತಿರುವ ಯುಗದಲಿ
ಸಮಯದೊಡನೆ ಓಡುವೆ
ಬೇಕಾಗಿದೆ ಸಂಯಮ ಸಹನೆ
ಎಲ್ಲಿಹುದು ಜನಕೆ ಕರುಣೆ?
@ಪ್ರೇಮ್@
08.01.2020


ಪ್ರೇಮ್ ಜೀ🙏

ನಿಜ ಜೀ ನಾವು ಎಲ್ಲರೂ ಓಡುತ್ತಿದ್ದಾರೆ ನಾವು ಓಡುತ್ತಿದ್ದೇವೆ.ಕೇಳಿದರೆ.
ಕುಳಿತು ಮಾತಾಡಲೂ ಸಮಯವಿಲ್ಲ ನಮ್ಮ ಕೈಯಲ್ಲಿ..
ಅದಕ್ಕಿಂತ ಹೆಚ್ಚಾಗಿ ತಾಳ್ಮೆಯಿಲ್ಲ ಮನದಲ್ಲಿ..ಯಾರೋ ಅಪಘಾತವಾಗಿ ಬಿದ್ದರೆ ಅವರನ್ನು ಉಪಚರಿಸುವದರ ಬದಲು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಆತುರ...
ಕರುಣೆಗೆ ಅರ್ಥವನ್ನೇ ಮರೆಯುತ್ತಿದ್ದೇವೆ...
ಅರ್ಥಪೂರ್ಣ ಹನಿ

ಧನ್ಯವಾದಗಳು💐
ವಿನುತಾ ಕಿಚ್ಚಿಕೇರಿ
[1/15, 11:56 AM] +91 70267 76576: ಪ್ರೇಮಾ ಜೀ ಅವರ
  ನಯನ
ಯತ್ರ ನಾರ್ಯಂತು ಪುಜ್ಯಂತೆ ರಮಂತೆ ತತ್ರ ತತ್ರ ದೇವತಾಃ ಎಂದು ಹೇಳುತ್ತೇವೆ ಆದರೆ ಬದುಕು ಬಲು ಬಿರುಸು ಹೆತ್ತ ಕರುಳೆ ಕಿತ್ತು ತಿನ್ನುವ ಹದ್ದಾಗುತ್ತದೆ.ಆಶ್ರಯದ ನೆಪದಲ್ಲೇ ಆಕ್ರಂದನ ಕೇಳುತ್ತದೆ.ಮುಗಿಯದ ಶೋಷಣೆಯಲ್ಲಿ ಅರಳುವ ಹೂ ಗಳೇಷ್ಟೋ, ಕಮರಿದ ಮೊಗ್ಗುಗಳೇಷ್ಟೋ. ಆ ನಯನಳ ಕಣ್ಣೀರಿಗೆ  ಕೊಣೆಯಲ್ಲಿ....
ಮಾರ್ಮಿಕ ಕಥೆ ಜೀ

ಕವಿ ಭಾವ ತಿಳಿಯುವಲ್ಲಿ ತಪ್ಪಾಗಿದ್ದರೆ ಒಂದು ಕ್ಷಮೆ ಇರಲಿ ಜೀ...

ಜಯಶ್ರೀ...
[1/15, 8:26 PM] +91 70267 76576: 🌸🌸🌸🌸🌸🌸🌸🌸🌸
*ಹನಿ ಹನಿ ಇಬ್ಬನಿ/ಚಿಂತಕರ ಚಾವಡಿ*
🦚🦚🦚🦚🦚🦚🦚🦚🦚
*ಇಂದಿನ ಫಲಿತಾಂಶ ಪಟ್ಟಿ*
🎪🎪🎪🎪🎪🎪🎪🎪🎪
*ವಾರ- ಬುಧವಾರ*
*ದಿನಾಂಕ -15.01.20*
*ಪ್ರಕಾರ -ನ್ಯಾನೋ ಕತೆ*
*ಅಡ್ಮಿನ್ -ಜಯಶ್ರೀ*
🐔🐔🐔🐔🐔🐔🐔🐔🐔
*ನ್ಯಾನೋ ಕಥೆಯ ಮೂರನೇ ದಿನ ಉತ್ತಮ ಕಥೆಗಳು ಹನಿಯಲ್ಲಿ ಮೂಡಿ ಬಂದಿವೆ. ಭಾಗವಹಿಸಿದ ಕವಿಗಳು ಎಲ್ಲರಿಗು ಧನ್ಯವಾದಗಳು*
🌹🌹🌹🌹🌹🌹🌹🌹🌹
*ಇಂದಿನ ಅತ್ಯುತ್ತಮ ನ್ಯಾನೋ*
🏆 *ಪ್ರೇಮ್ ಅವರ ನಯನ*
🍉🌹🍉🌹🍉🌹🍉🌹🍉
*ಉತ್ತಮ ನ್ಯಾನೋಗಳು*
🦚 *ಲಕ್ಷ್ಮಿಕಾಂತ್ ಅವರ  ಮೂಡನಂಬಿಕೆ*
 🦚 *ಜೋಶಿಯವರ ಪರಿಸ್ಥಿತಿ*
🦚 *ಭಾರತಿಯವರ ಹೆಣ್ಣು*
☘☘☘☘☘☘☘☘☘
*ಅತ್ಯುತ್ತಮ ವಿಮರ್ಶಕರು*
*🧐ಸಂತೋಷ ಪಿಶೆ*
💐💐💐💐💐💐💐💐
*ಭಾಗವಹಿಸಿದ ಎಲ್ಲರಿಗೂ, ಬಿಡುವು ಮಾಡಿಕೊಂಡು ಚಾವಡಿಗೆ ಬಂದವರಿಗೂ  ಧನ್ಯವಾದಗಳು*
🙏🏻🙏🏻🙏🏻🙏🏻🙏🏻🙏🏻🙏🏻🙏🏻
*ನಾಳೆ ನಿಮಗಿಷ್ಟದ ವಿಷಯದ ಕುರಿತು ಒಂದು ನ್ಯಾನೋ ಕತೆ ಬರೆದು ಹನಿಗೆ ಹಾಕಿ. ಚಾವಡಿಯಲ್ಲಿ ಅನಿಸಿಕೆ, ವಿಮರ್ಶೆ, ಮೆಚ್ಚುಗೆಗಳು ಇರಲಿ*
🐱🐱🐱🐱🐱🐱🐱🐱🐱
*ನಾಳೆಯ ಅಡ್ಮಿನ್, ಉತ್ತಮ ಕವಯತ್ರಿ ಪ್ರೇಮ್  ಇವರಿಗೆ ಬಳಗದ ಪರವಾಗಿ ಸ್ವಾಗತ*
🌹🌹🌹🌹🌹🌹🌹🌹🌹
*ಬಳಗದ ಚೇತನ ಖುಷಿ ಗುರುಗಳಿಗೆ ವಂದಿಸುತ್ತ*
👏👏👏👏👏👏👏👏👏
*🌚ಸರ್ವರಿಗೂ ಶುಭ ರಾತ್ರಿ*🌚
[1/16, 8:39 PM] Wr Sudha Telkar Mam: ಸೊಗಸಾದ ವಿಮರ್ಶೆಗೆ ಮನಃಪೂರ್ವಕ ಧನ್ಯವಾದಗಳು ಪ್ರೇಮ್. ‌ಬಹಳ ಜನ ರಿಟೈರ್ ಆದ ಮೇಲೂ ದುಡಿಯುವುದು ನಿಜ. ನಿನ್ನ ಅನಿಸಿಕೆಗೆ ನನ್ನ ಸಹಮತವಿದೆ. 
ಕೆಲವು ಸಲ ಮನೆಯಲ್ಲಿ ಪ್ರೋತ್ಸಾಹ ಇರದೆಯೋ , ಅನಾರೋಗ್ಯದಿಂದಲೋ ಎಲ್ಲರೂ ದುಡಿಯಲಾಗುವುದಿಲ್ಲ. ವಯಸ್ಸು ಹೆಚ್ಚಾಗಿದ್ದರೂ ಕೈಲಾಗುವುದಿಲ್ಲ. 
ಆದರೂ ತುಂಬಾ ಅವಸರದಲ್ಲಿ ಬರೆದೆ. ನನಗೇ ತೃಪ್ತಿಯೆನಿಸಲಿಲ್ಲ. 
ಇಂದಿನ ಅಡ್ಮಿನಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿರುವೆ. ಸಲಹೆ ,ಸೂಚನೆಗಳಿಗೆ ಸದಾ ಸ್ವಾಗತವಿದೆ ಪ್ರೇಮ್. ಅಭಿನಂದನೆಗಳು.🙏🙏💐💐😊
[1/18, 2:44 PM] Wr Veena Joshi Ankola: ಪ್ರೇಮ  ಅವರ  ಪ್ರಾಣ 

*   ಪ್ರಾಣ  ಅಮೂಲ್ಯ .
*  ಅದನ್ನು  ಚೆನ್ನಾಗಿ  ಪದಗಳ ಜೋಕಾಲಿಯಲಿ ಇಟ್ಟು  ಚೆನ್ನಾಗಿ 
ತೂಗಿದ್ದೀರಿ
*   ವಾಸ್ತವವಾಗಿ ಮನುಷ್ಯ ಪ್ರಾಣಿ
ಇತರ ಜೀವಿಗಳ  ಜೀವಕ್ಕೆ ಕವಡೆ
ಕಾಸಿನ ಕಿಮ್ಮತ್ತು ನೀಡಿದೆ ಮೆರೆಯುತ್ತಿದ್ದಾನೆ.

ಪ್ರಪಂಚ  ಸಮತೋಲನ  ಇಲ್ಲದಿರೆ ಉರುಳುವುದು ಸತ್ಯ

ಎಂಬುದನ್ನು  ಅರಿತರೆ ಒಳಿತು .

ಉತ್ತಮ  ಕಥೆ  ಓದಿಸಿದಿರಿ ಧನ್ಯವಾದಗಳು .
[1/20, 1:49 PM] +91 98866 11494: ನಮಸ್ತೆ ಪ್ರೇಮ ಮೇಡಂ🙏

ನಿಮ್ಮ ಕಾಮಿಡಿ ಕವನಗಳು ಸೂಪರ್ ಮೇಡಂ.....

ನಾಯಿಯ ಬಗ್ಗೆ ಅದ್ಭುತವಾಗಿ ಬರೆದಿದ್ದೀರಿ...... ನಾಯಿಯ ನಿಯತ್ತು, ಮನೆಯ ಕಾಯುವ ಪರಿ ಮತ್ತು ಅನುಮತಿ ಇಲ್ಲದೆ ಮನೆಗೆ ಬಂದರೆ ಅದು ಕೊಡುವ ಶಿಕ್ಷೆಯ ಬಗ್ಗೆ ಉತ್ತಮವಾಗಿ ಕವನದ ಮೂಲಕ ಬರೆದಿದ್ದೀರಿ ಮೇಡಂ.......ಶುಭವಾಗಲಿ.... ಧನ್ಯವಾದಗಳು ಮೇಡಂ.

ಕೆ ಎಸ್ ಗೀತಾವಿಜಯ ಕುಮಾರ್
[1/24, 7:11 PM] Wr Vani Bhandari: 🍄🐚🍄🐚🍄🐚🍄🐚🍄
*ಹನಿ ಹನಿ ಇಬ್ಬನಿ ಸಾಹಿತ್ಯ ಬಳಗ /ಚಿಂತಕರ ಚಾವಡಿ*
🌱🎍🌱🎍🌱🎍🌱🎍🌱
*ಇಂದಿನ ಫಲಿತಾಂಶ ವಿವರ*
❣❣❣❣❣❣❣❣❣
*ದಿನಾಂಕ-24.01.2020*
*ವಾರ ಶುಕ್ರವಾರ*
*ಸಾಹಿತ್ಯ ಪ್ರಕಾರ- ಕವನ*
*ಅಡ್ಮಿನ್-ನಾ ಕನ್ನಡಿಗ*
🔮🔮🔮🔮🔮🔮🔮🔮🔮
 *ಬೆಡಗು  ಪದವನ್ನು ಬಳಸಿ ಬರೆದ ಎಲ್ಲಾ ಕವನಗಳು ಸುಂದರ.ಭಾಗವಹಿಸಿದ ಕವಿ ಮನಸುಗಳಿಗೆ ಅಭಿನಂದನೆಗಳು*
🦜🦢🦜🦢🦜🦢🦜🦢🦜
*ಇಂದಿನ ಅತ್ಯುತ್ತಮ ಕವನ ಬರೆದವರು*
🦚 *ಕುಮಾರ ಚಲವಾದಿ*

*ಉತ್ತಮ ಕವನಗಳು*
🥇 *ಮೊಗೇರಿ ಶೇಖರ*
🥈 *ಪ್ರೇಮ್..*
🥉 *ಶಿವಪ್ರಸಾದ್ ಆರಾಧ್ಯ*
🌳🦔🌳🦔🌳🦔🌳🦔🌳
*ಇಂದಿನ ವಿಮರ್ಶಕರು*
🧐 *ಮಂಜುಳ*
🧐 *ಸಂತೋಷ ಪಿಶೆ*
🔮🔮🔮🔮🔮🔮🔮🔮🔮
*ವಿಜೇತರು ಮತ್ತು ವಿಮರ್ಶಕರಿಗೆ ಅಭಿನಂದನೆಗಳು*
☘🌹☘🌹☘🌹☘🌹☘
*ನಾಳೆ*
*🔥ಬೆಂಕಿ🔥* 
*ಎಂಬ ಪದ ಬಳಸಿ ಒಂದು ಕವನ ಬರೆಯಿರಿ, ಚಾವಡಿಯಲ್ಲಿ ಅನಿಸಿಕೆ, ಮೆಚ್ಚುಗೆ, ವಿಮರ್ಶೆಗಳು  ಇರಲಿ*
✍✍✍✍✍✍✍✍✍
*ನಾಳೆಯ ಅಡ್ಮಿನ್ ಜಯಲಕ್ಷ್ಮಿ  ಇವರಿಗೆ ಬಳಗದ ಪರವಾಗಿ ಆತ್ಮೀಯ ಸ್ವಾಗತ*
🌺🌺🌺🌺🌺🌺🌺🌺🌺
*ಬಳಗದ ಸ್ಫೂರ್ತಿ ಚೇತನ ಖುಷಿ ಗುರುಗಳಿಗೆ ವಂದಿಸುತ್ತಾ*
👏👏👏👏👏👏👏👏👏
*🌚ಸರ್ವರಿಗೂ ಶುಭ ರಾತ್ರಿ🌚*
[1/28, 6:51 AM] Wr Shivaprasad Aradhya: ಪ್ರೇಮರವರ ಕವನ ನೀತಿ ಭೋದಕವಾಗಿದ್ದು ವಿಜ್ಞಾನ ಎಷ್ಟೇ ಬೆಳೆದರೂ ಅಹಂಕಾರ ವೂ ಅಷ್ಟೇ ಬೆಳೆಯಿತು. ಪ್ರಕೃತಿಯ ಮುಂದೆ ಅವನಾಟವೇನೂ ನಡೆಯದು.ಎಂಬುದು ಈ ಕವನದಿ ವ್ಯಕ್ತವಾಗಿದೆ.
ಬೆಳ್ಳಂಬೆಳಗ್ಗಿನ ಕವನ  ಬೇಗನೆ ಬರೆದು ಹಾಕುವ ಉಸಾಬರಿಯಲ್ಲಿ ಬರೆದಂತೆ ಕಂಡರೂ ನೀತಿ ಭೋದಕವಾಗಿದೆ. ಪ್ರಾಸ ಬರಲ್ಲಿಲ್ಲವಾ ಚಿಂತಿಸಬೇಡಿ ಮುಕ್ತವಾಗಿ ಗಪದ್ಯ ಬರೆಯಿರಿ.ಪ್ರಾಸಮಯವಾಗಿ ಬರೆಯುವ ಯತ್ನ ನಡೆಯಿತು ತಮ್ಮದು ಇರಲಿ ಹೀಗೇ ಬರೆಯುತ್ತಿರಿ ಶುಭವಾಗಲಿ 


ಶಿವಪ್ರಸಾದ್ ಆರಾಧ್ಯ
[1/28, 10:00 AM] Wr Nagamma: ಪ್ರೇಮ್ ..ಜೀ ನಮಸ್ತೆ🙏🏼.

ನೀತಿ ಕಲಿ...

ವಾಸ್ತವದ..ಅತಿಯಾಸೆಗಾಗಿ ಆಡಂಬರದ... ಬದುಕಿಗಾಗಿ..ಮಾನವ ಮಾಡುವ, ಯೋಚಿಸುವ , ಯೋಜಿಸು..ವ..ಆಯಾಮಗಳನ್ನು ...ಬಹಳ ಪ್ರಬುದ್ಧ..ಪದಗಳಲ್ಲಿ...ಕವನದೊಳಗೆ ಹಿಡಿದಿಟ್ಟ..ಪರಿಯದು..ಸೊಗಸಾಗಿದೆ...

ಧನ್ಯವಾದಗಳು.

ಎಸ್.ನಾಗಮ್ಮ🌹
[1/29, 7:21 PM] Wr Shivaprasad Aradhya: ಧರೆಯ ಮೊರೆ ನನಗೂ ಕೇಳಿತು ಪ್ರೇಮ್ ಸದಾ ಸಮಾಜಮುಖಿಯಾಗೇ ಬಡಿದೆಬ್ಬುಸುವ ಅರಿವಿನ ಕವನಗಳ ಮಾತೆ ತಾವು ಚೆನ್ನಾಗಿ ಬರೆದಿದ್ದೀರಿ ಅಭಿನಂದನೆಗಳು

ಶಿವಪ್ರಸಾದ್ ಆರಾಧ್ಯ
[1/30, 8:17 AM] @PREM@: ಅಮವಾಸ್ಯೆ ಬೇಡ..

ಚಂದದ ಚಂದಿರನೆ ನೀನೇಕೆ ನನಗಿಂದು ಅಮವಾಸ್ಯೆಯ ನೀಡಿದೆ?
ನನ್ನ ಕಾಣಲು ಬರದೆ ಅಮವಾಸ್ಯೆಯ ಕತ್ತಲನು ತುಂಬಿದೆ!

ಚುಕ್ಕಿ -ತಾರೆಗಳು ಮಿನುಗುತಿಹವು ತಮ್ಮದೇ ದರ್ಪದಲಿ!
ಆದರೇನು, ಇಳೆಗೆ ಕಳೆ ತರಲು ನೀನೇ ಬೇಕಲ್ಲವೇ ಇರುಳಲಿ?

ಹಗಲು ರವಿ ಕೊಡುವ ಬಿಳುಪು ಕಿರಣಗಳ ಕಾಂತಿ ಒಂದು ಬದಿಗೆ,
ಮತ್ತೆ ನನ್ನ ಬೇರೆ ಬದಿಯನೂ ತಣಿಸಬೇಕಲ್ಲವೇ ನೀತಿಯಲಿ ಸರ್ವರಿಗೆ!

ನೀನೇಕೆ ಬರದಾದೆ ಆದಿತ್ಯನ ಕಾಂತಿಯನೇ ಹೊತ್ತು ತಂಪಾಗಿ?
ತಿರೆ ಕಾದಿಹಳು ಬಾಳ ನಿಶೆಯ ಬೆಳಕಿಗಾಗಿ!

ಇಂದ್ರನ ರಥವ ದತ್ತು ಪಡೆದಾದರೂ ನೀ ಬರಬೇಕಿತ್ತು!
ಅಮವಾಸ್ಯೆಯೆಂಬ ಪದವ ನಿನ್ನ ಶಬ್ದಕೋಶದಿ ಅಳಿಸಿ ಹಾಕಬೇಕಿತ್ತು!

ನಿನ್ನಿರವೆ ನನಗೆ ಖುಷಿ ತಿಳಿಯದೇ ಸೋಮನೇ?
ನೀ ಬರಲು ಹಾಲ್ಚೆಲ್ಲಿದ ಬೆಳದಿಂಗಳು, ಮರೆತೆಯಾ ಮಾಮನೇ?

ಚಂದ್ರೋದಯದ ಗಳಿಗೆಗೆ ತಡಮಾಡದಿರು ಎಂದೆಂದೂ..
ಧರಣಿ ಕಾದು ಬೆಂಡಾಗಿಹಳು ತಿಳಿದುಕೋ ಮುಂದೂ..

ವಿರಹದುರಿಯಲಿ ಬೇಯುವೆ ನೀನಿರದ ಕ್ಷಣಗಳಲಿ
ಗಾಢಾಂಧಕಾರದಲಿ ನೆನೆಯುವೆ ನೀ ಬರದ ಕರಾಳ ಕಪ್ಪಿನಲಿ..

ಬೇಸರಿಸದಿರು ಧರಿತ್ರಿ ಮನವ ಅಮವಾಸ್ಯೆನು ತಂದು,
ಬೇಡುತಿಹೆ ಬೆಳಕ ನೀಡು ನೀನು ಮನಕೆ  ವರುಷದಲಿ ಪ್ರತಿದಿನವೂ ಬಂದು!
@ಪ್ರೇಮ್@
30.01.2020
[1/30, 2:29 PM] Wr Shakunthala Dalera: *ಪ್ರೇಮ್ ರವರ  " ಅಮವಾಸೆ ಬೇಡ" ಕವನದಲ್ಲಿ...*
  
ಅಮವಾಸೆ ಕಳೆದ ನಂತರವೇ ಹುಣ್ಣಿಮೆ... ಕಾಯಬೇಕು ಅಷ್ಟೇ. ವಿರಹ ವೇದನೆಯನ್ನು ಅಮವಾಸೆಗೆ ಹೋಲಿಸಿ ಅರ್ಪಿಸಿದ ಭಾವನಾತ್ಮಕ ಪರಿಗೆ ಶರಣು ಮೇಡಂ...ಒಳ್ಳೆಯ ಕವನ ಓದಿಸಿದ್ದಕ್ಕೆ ಧನ್ಯವಾದಗಳು 👌👌👌👌🙏🙏🙏🙏
[2/10, 5:40 PM] Wr Mogeri Shekhar Devadiga: *ರುಬಾಯಿ*

ಮಾಡಬೇಕಯ್ಯ ಯೋಗ, ವ್ಯಾಯಾಮ
ರೋಗರುಜಿನಗಳಿಗೆ ಅದು ಪಂಗನಾಮ
ಚಾಟಿ ಬೀಸಿದರಿಲ್ಲಿ ಕವಿ *ಲಿಂಗರಾಜರು*
ಪರಾವಲಂಬಿ ಬದುಕಿಗೆ ಹಾಕಿ ವಿರಾಮ

*ಮೊಗೇರಿ ಶೇಖರ ದೇವಾಡಿಗ*
[2/11, 7:31 AM] Wr Shivaprasad Aradhya: ಈ ದಿನದ ಮೊದಲಕವನ ಆಳವಾಗಿದೆ. ಅದು ಭೂಮಿಯೊಳಗೇ ಹೋಗಿದೆ.ಒಂದು ಮೊದಲ ಕವನವೇ ಅತ್ಯುತ್ತಮವಾಗಿ ಹೊರಹೊಮ್ಮುತಿರುವ ಬಳಗದ ಹಾಗೂ ಕವಿಯ ಹೆಗ್ಗಳಿಕೆ ಇದಾಗಿದೆ.

ತೆರೆಮರೆಯ ಸಾಧನೆ ನಿಜಕ್ಕೂ ಮನೆಯ ತಾಯಿಯದು.ಆಕೆ ಒಳಗೆ ನನಗಾಗಿ ನಮ್ಮ ಕುಟುಂಬಕ್ಕೆ ಚಾಕರಿ ಮಾಡುತಾ ನನ್ನನ್ನು ಚಿಂತಕರ ಚಾವಡಿಗೆ ಬಿಟ್ಟಿದ್ದಾಳೆ.ಆದರೆ ನಿಜವಾದ ಚಿಂತಕಿ ನನ್ನವಳು.ನಾನು ಬರಿಯ ಸೊನ್ನೆ

ತಾಯಿ ಬೇರಂತೆ ಕುಟುಂಬದ ಜೀವಾಳ ಒಲವ ಜಲ ಅವಳು.ಹುಡುಕುಡುಕಿ ಒಲವುಗಳ ಸಾಗಿ ನೆಲೆಯ ಭದ್ರ ಪಡಿಸುವಾಕಿ.ಸಂಸಾರದ ಗಿಡ ಮರವಾಗಿ ನೆಲೆಯಾಗಲು ತಾಯಿ ತಾಯಿ ಬೇರಾಗಿ ಹೊರಜಗದ ಮರೆಯಲೇ ದುಡಿಯುವವಳು.

ಅಪ್ಪ ಆಕಾಶ ಅಮ್ಮ ಭೂಮಿ.ಅಪ್ಪನ ತಲೆಯೆತ್ತಿ ಓಡಾಡುವ ಘನತೆಯ ಹಿಂದೆ ಅಮ್ಮನ ಆಳವಾದ ತಪವಿದೆ.ಮನೋಜ್ಞವಾಗಿ ಬರೆದಿರುವ ತಾಯಿಗೆ ಶರಣು ಶುಭೋದಯ ಶುಭವಾಗಲಿ

 ಶಿವಪ್ರಸಾದ್ ಆರಾಧ್ಯ
[2/13, 1:46 PM] Wr Vinuta Kicchikeri: ಪ್ರೇಮ್ ಮೇಡಮ್ ಜೀ ನಮಸ್ತೇ

👉🏻 ರಾಗ ಬಧ್ಧವಾಗಿ ಬರೆದ ಕವನ ಚಂದ

👉🏻 ಇಂದಿನ ಪದ ಬಳಕೆ ಮಾಡಿ ಮೂಡಿಬಂದಿದೆ

👉🏻 ಸರ್ಕಾರಿ ಶಾಲೆಯಲ್ಲಿ ಏನು ಕಲಿಸುತ್ತಾರೆ ಎಂಬುದಕ್ಕೆ ಉತ್ತರವಿದೆ

👉🏻 ಪಾಲಕರು ಎಷ್ಟು ಕಷ್ಟ ಪಟ್ಟು ನಮ್ಮನ್ನು ಓದಲಿ ಎಂಬ ಉದ್ದೇಶ, ಶಿಕ್ಷಕರು ನಮಗೆ ಒಳ್ಳೆಯ ಪಾಠ,ಕಲಿಕೆ,ನೀತಿ ಕಥೆಗಳು, ನಾವು ನಮ್ಮ ಸ್ನೇಹಿತರ ಜೊತೆ ಹೇಗಿರಬೇಕೆಂಬುದನ್ನು ಶಾಲೆ ಕಲಿಸಿಕೊಡುತ್ತದೆ..ಪದವಿ ಪಡೆದರು ಸಾಲದು ಅಮ್ಮನ ಜೀವನ ಪಾಠವೂ ಮುಖ್ಯ. ರುಚಿ,ಶುಚಿಯ ಬಗ್ಗೆ ಒಂದಷ್ಟು ತಿಳುವಳಿಕೆ ನೀಡುವದು ಅಮ್ಮ ಎಂಬುದನ್ನು ನಿಮ್ಮ ಕವನದಲ್ಲಿ ತಿಳಿಸಿದ್ದೀರಿ

👉🏻ಕೊನೆಯ ಚರಣ ಹಿಡಿಸಿತು

ಧನ್ಯವಾದಗಳು💐
ವಿನುತಾ ಕಿಚ್ಚಿಕೇರಿ
[2/15, 2:27 PM] Wr Vara Lakshmi Amma: ಪ್ರೇಮ ಅವರ ಶಿವಸ್ತುತಿ

 ಸಾಮಾನ್ಯವಾಗಿ   ನಾವು  ಪ್ರಾರ್ಥನೆ ಮಾಡುವಾಗ  ಅದು ಕೊಡು,  ಇದು ಕೊಡು,  ಎಂದು ಬೇಡಿಕೆಗಳ ಪಟ್ಟಿ ಇಡುತ್ತಾ ಹೋಗುತ್ತೇವೆ,  ಆದರೆ ಕವಯತ್ರಿ  ಪ್ರೇಮ ಅವರು ನಮ್ಮಲ್ಲಿರುವ ಮಾತ್ಸರ್ಯ,  ದ್ವೇಷ ಅವುಗಳನ್ನು  ನೀಗಿಸಿ ಎಲ್ಲರಲ್ಲಿ  ಪ್ರೇಮಭಾವವನ್ನು ತುಂಬಿ,  ಭಕ್ತಿಮಾರ್ಗದಲ್ಲಿ ನಡೆಯುವ ಶಕ್ತಿ ಕೊಡು ಎಂದು ಶಿವನನ್ನು  ಸ್ತುತಿಸಿದ್ದಾರೆ.   ಭಕ್ತಿಯ ಮಾರ್ಗದಲ್ಲಿ  ನಡೆಯುತ್ತಾ  ಜೀವನದ ಉತ್ತುಂಗಕ್ಕೇರುವ ಬಯಕೆ ವ್ಯಕ್ತಪಡಿಸಿದ್ದಾರೆ.  ಸದುದ್ದೇಶದ  ಕವನ 🙏
[2/15, 6:02 PM] Wr Nagamma: ಪ್ರೇಮ್ ‌ಜೀ🙏🏼

ನಿಮ್ಮ 
ಶಿವಸ್ತುತಿಗೆ..

ತಲೆ‌ದೂಗಿದೆ..

ನನ್ನ ‌ಗುಣಗಳ ‌ಉತ್ತುಂಗಕ್ಕೇರಿಸು..ವಾವ್ ಸೂಪರ್..

ಚೆಂದದ ‌ದೈವ ಸ್ಮರಣೆ
.
.ಭಕ್ತಿ ಸ್ಪುರಣ..!!

ತಮ್ಮ..ಸುಂದರ ವಾದ‌ಶಿವಸ್ತುತಿಗಾಗಿ..

ಧನ್ಯವಾದಗಳು.

ಎಸ್. ನಾಗಮ್ಮ🌹
[2/17, 11:47 AM] +91 99641 78536: 💐🙏 ಪ್ರೇಮ್ ಸರ 🌹

ಬದುಕು ಬಂಗಾರ🌹

🌹ಸುಂದರವಾದ ಕವನ ರಚನಿ ಭಾವನೆಗಳಿಂದ ತುಂಬಿದ, ಮನಸಿನ ಭಾವ ಬಂಧನ ವಿಶೇಷ ಸ್ನೇಹ ಮಿಲನಗಳ ಹೇಳುವ ಕವನ 👌👌👌


ಅಂದದ ಕವನ 👌👌👌

ಬಾಬಣ್ಣ. 
(ಪ್ರಶಾಂತ ಆರ ದೈವಜ್ಞ)
ಕರೇಕ್ಯಾತನಹಳ್ಳಿ.
[2/18, 8:11 AM] Wr Vinuta Kicchikeri: ಪ್ರೇಮ್ ಮೇಡಮ್ ಜೀ🙏

👉🏻ಕವನದ ಆಶಯ ಸೂಪರ್

👉🏻 ಬದುಕಲ್ಲಿ ಏನೇನು ನೋಡಬಹುದು...ಒಂದು ಮುಂಜಾನೆಯಿಂದ ಸಂಜೆಯವರೆಗೆ ಎಂಬುದನ್ನು ಬಹಳ ಚೆನ್ನಾಗಿ ಬರೆದಿರುವಿರಿ.

👉🏻ಕೊನೆಯ ಚರಣ ಮನಸ್ಸಿಗೆ ಹಿಡಿಸಿತು

👉🏻 ಆದರೆ ಕಣ್ಣೀರು ಪದ ನನಗೆ ಕಾಣಲಿಲ್ಲ(ಕ್ಷಮಿಸಿ)
ಕೊನೆಯ ಸಾಲಿನಲ್ಲಿ ಇತರರಿಗೆ ಆಗಬೇಕಿತ್ತೇನೋ..‌ಲಗುಬಗೆಯಿಂದ ಬರೆದಿರುವಿರಿ ಅನಿಸಿತು


ಧನ್ಯವಾದಗಳು👏💐
ವಿನುತಾ ಕಿಚ್ಚಿಕೇರಿ
[2/18, 10:33 AM] +91 89701 82067: ಪ್ರೇಮ್ರವರೆ ಯೋಚನಾಲಹರಿಯನ್ನು ತುಂಬಾ ಆಳಕ್ಕಿಳಿಸುವ ಕವನ."ಸಂತನಾದರೂ ಮನದಿ ದುಃಖವಿರುವ ಹಾಗೆ" ಎಷ್ಟು ಆಳವಾದ ಯೋಚನೆ!!ವಾಹ್...ಕೆಲವರಿಗೆ ಹಾಗೆ ಕಷ್ಟಗಳು ಬಂದರೆ ಬರುತ್ತಲೇ ಇರುತ್ತವೆ.ಆದರೆ ಕರಿಮೋಡವೂ ಕಳೆದು ಮಳೆಯಾಗುತ್ತದೆ ಕಾಯಬೇಕಷ್ಟೇ.ಮೂರನೆಯ ಚಾರಣ ಓದುತ್ತಾ ಜಯಂತ್ ಕಾಯ್ಕಿಣಿಯವರ "ಬೊಗಸೆಯಲ್ಲಿ ಮಳೆ" ಕೃತಿ ನೆನಪಾಯಿತು.ಗಡಿ ಅಂದರೆ ಏನಪ್ಪಾ ಎಂದು ಪ್ರಶ್ನಿಸುವ ಸೈನಿಕರಿಗೆಲ್ಲ ಆಟಿಕೆಯ ಪಿಸ್ತೂಲ್ ನೀಡುವ ಮೂಲಕ ಎಲ್ಲರನ್ನೂ ನಗಿಸಬಾರದೇಕೆ ಎಂದು ಮುಗ್ಧವಾಗಿ ಪ್ರಶ್ನಿಸುವ ಮಗು ದೇಶದೇಶಗಳ ನಡುವಿನ ವೈಮನಸ್ಯದ ವಿಷಯ ಬಂದಾಗ ಪ್ರತೀ ಬಾರಿಗೂ ನೆನಪಾಗುತ್ತದೆ ನನಗೆ.ತಾ ಬದುಕಿ ಇತರರಿಗೂ ಅವಕಾಶ ಕೊಡಬೇಕು ಎನ್ನುವ ಕವಿ ಭಾವ ಇಷ್ಟವಾಗುತ್ತದೆ.🙏🏻

ನಿಶ್ಮಿತಾ ಪಳ್ಳಿ
[2/18, 5:13 PM] Tr Ramesh: ಪ್ರೇಮ್ ಅವರ ಕವನ *ಜೀ-ವನ ಕ-ವನ* ಚೆನ್ನಾಗಿದೆ.  ಮೂರು ದಿನದ ಬಾಳು.. ಪ್ರೀತಿಯಿಂದ ಬಾಳುವುದೊಂದನ್ನು ಬಿಟ್ಟು ಮತ್ತೆಲ್ಲ ಮಾಡುತ್ತಿದ್ದೇವೆ.. ದಿನವೂ ಸಂತಸವಾಗಿ ಬಾಳುವ ಎಂಬುದನ್ನು ಬಹಳ ಅರ್ಥವತ್ತಾಗಿ ತಿಳಿಸಿದ ಕವನ..

ಧನ್ಯವಾದಗಳು ತಮಗೆ 🙏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ